ಐತಿಹಾಸಿಕ ರಥೋತ್ಸವದ ವೇಳೆ ರಥದ ಇರುಸು ಮುರಿದಿದ್ದು ಅದೃಷ್ಟವಶಾತ್ ಯಾವುದೆ ಅವಘಡ ಸಂಭವಿಸಿಲ್ಲ.
ಕೊಪ್ಪಳ[ಮಾ. 28] ಐತಿಹಾಸಿಕ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ನಡೆಯುವಾಗ ರಥದ ಇರುಸು ಮುರಿದಿರುವ ಘಟನೆ ಬುಧವಾರ ನಡೆದಿದ್ದು ಯಾವುದೆ ಅಪಾಯ ಸಂಭವಿಸಿಲ್ಲ.
ಸರಿಯಾಗಿ 4 ಗಂಟೆಗೆ ಆರಂಭವಾದ ರಥೋತ್ಸವವು ಪಾದಗಟ್ಟಿ ತಲುಪುವ ಮುನ್ನವೇ ನಡು ಬೀದಿಯಲ್ಲಿರುವಾಗ ರಥದ ಎಡಭಾಗದ ಗಾಲಿ ತೋಡಿಸಲಾಗಿರುವ ಇರುಸು ಮುರಿದಿದೆ. ರಥದ ಇರುಸು ಮುರಿದಿರು ಸುದ್ದಿ ತಿಳಿದ ದೇವಸ್ಥಾನ ಅಧಿಕಾರಿಗಾಳು ಹಾಗೂ ಪೋಲೀಸ್ ಅಧಿಕಾರಿಗಾಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.
ಇರುಸು ಮುರಿದ ಪರಿಣಾಮ ಯಾವುದೇ ಹಾನಿಯಾಗಿಲ್ಲ. ಘಟನೆಗೆ ಏನು ಕಾರಣ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 28, 2019, 7:31 PM IST