ಮಾಯಾವತಿಗೆ 24 ವರ್ಷದ ಆಕಾಶ್‌ ಉತ್ತರಾಧಿಕಾರಿ?| ದೇವೇಗೌಡರ ಶಿಷ್ಯ ಡ್ಯಾನಿಷ್‌ ಅಲಿಗೆ ಬಂಪರ್| 

ಲಖನೌ[ಜೂ.24]: ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಶಿಷ್ಯ ಹಾಗೂ ಉತ್ತರಪ್ರದೇಶದ ಅಮರೋಹ ಕ್ಷೇತ್ರದ ಸಂಸದ ಡ್ಯಾನಿಷ್‌ ಅಲಿ ಅವರು ಲೋಕಸಭೆಯಲ್ಲಿನ ಬಿಎಸ್ಪಿ ನಾಯಕರಾಗಿ ಆಯ್ಕೆಯಾಗಿದ್ದಾರೆ.

Add Asianetnews Kannada as a Preferred SourcegooglePreferred

ಇದೇ ವೇಳೆ ಲಂಡನ್‌ನಲ್ಲಿ ವ್ಯಾಸಂಗ ಮಾಡಿರುವ, 24 ವರ್ಷದ ತಮ್ಮ ಬಂಧು ಆಕಾಶ್‌ ಆನಂದ್‌ ಅವರನ್ನು ಬಿಎಸ್ಪಿಯ ರಾಷ್ಟ್ರೀಯ ಸಮನ್ವಯಕಾರರನ್ನಾಗಿ ಪಕ್ಷದ ಮುಖ್ಯಸ್ಥೆ ಮಾಯಾವತಿ ನೇಮಕ ಮಾಡಿದ್ದಾರೆ. ಇದರಿಂದಾಗಿ ಆಕಾಶ್‌ ಅವರು ಮಾಯಾವತಿ ಉತ್ತರಾಧಿಕಾರಿಯಾಗಬಹುದು ಎಂಬ ಚರ್ಚೆಗಳು ಜೋರಾಗಿವೆ.

ಕರ್ನಾಟಕದಲ್ಲಿ ಜೆಡಿಎಸ್‌- ಕಾಂಗ್ರೆಸ್‌ ನಡುವೆ ದೋಸ್ತಿ ಕುದುರಿಸಿ ಸರ್ಕಾರ ರಚನೆಯಾಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಡ್ಯಾನಿಷ್‌ ಅಲಿ ದಶಕಗಳಿಂದ ದೇವೇಗೌಡರ ಜತೆ ಗುರುತಿಸಿಕೊಂಡವರು. ಜೆಡಿಎಸ್‌ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇವೇಗೌಡರ ಅನುಮತಿ ಪಡೆದು ಬಿಎಸ್ಪಿ ಅಭ್ಯರ್ಥಿಯಾಗಿ ಅಮರೋಹದಿಂದ ಕಣಕ್ಕಿಳಿದು ಆಯ್ಕೆಯಾಗಿದ್ದರು.

ಲಖನೌದಲ್ಲಿ ಭಾನುವಾರ ನಡೆದ ಬಿಎಸ್ಪಿ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರನ್ನು ಲೋಕಸಭೆಯಲ್ಲಿನ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಇದೇ ವೇಳೆ, ಮಾಯಾವತಿ ಸೋದರ ಆನಂದ ಕುಮಾರ್‌ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆಕಾಶ್‌ ಆನಂದ್‌ ಹಾಗೂ ರಾಮ್‌ ಜೀ ಗೌತಮ್‌ ಎಂಬುವರನ್ನು ಬಿಎಸ್ಪಿ ರಾಷ್ಟ್ರೀಯ ಸಮನ್ವಯಕಾರರನ್ನಾಗಿಸಲಾಗಿದೆ.