ಬಿಜೆಪಿ ಮಣಿಸಲು 'ದಳ'ಪತಿಯ ಹೊಸ ದಾಳ? 'ಕೈ' ಹಿಡಿಯಲು ಮುಂದಾದ ಜೆಡಿಎಸ್
ಕಾಂಗ್ರೆಸ್ ಜೊತೆ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಳಿವು ನೀಡಿದ್ದು, ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿದೆ.
ಬೆಂಗಳೂರು: ಕಾಂಗ್ರೆಸ್ ಜೊತೆ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಳಿವು ನೀಡಿದ್ದು, ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿದೆ.
ಪ್ರಗತಿಪರರ ಸಭೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿಗೆ ಸಿದ್ಧ ಎಂದ ಮಾಜಿ ಪ್ರಧಾನಿ, 'ಕಾಂಗ್ರೆಸ್ ನಮಗೆ ಎಷ್ಟು ಸೀಟು ಬಿಟ್ಟು ಕೊಡುತ್ತೆ ಅನ್ನೋದು ಹೇಳಲಿ' ಎಂದಿದ್ದಾರೆ.
'ನಾವು ಅವರಿಗೆ ಎಷ್ಟು ಸೀಟು ಕೊಡಬೇಕೆಂಬುದನ್ನು ಕಾಂಗ್ರೆಸ್ ನಿರ್ಧರಿಸಲಿ. ಕಾಂಗ್ರೆಸ್ ದೊಡ್ಡ ಪಕ್ಷ, ಹಾಗಾಗಿ ಅವರೇ ಮೊದಲು ಲಿಸ್ಟ್ ಕಳಿಸಲಿ. ಸಮಾಜವಾದಿ ಪಕ್ಷ ಸೀಟ್ ಕೇಳಿದ್ರೂ ಬಿಟ್ಟುಕೊಡಲು ಸಿದ್ಧ,' ಎಂದು ಬೆಂಗಳೂರಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಚುನಾವಣಾ ಸಂಹಿತೆ ಅಡ್ಡಿ