ಚಿಕ್ಕನಾಯಕನಹಳ್ಳಿ  ಪಟ್ಟಣದಲ್ಲಿ ಹಾಕಿರುವ ಫ್ಲೆಕ್ಸ್ ಬಗ್ಗೆ ಮಾಹಿತಿ ಕೇಳಲು ಬಂದ ವಕೀಲ ಮಂಜುನಾಥ್ ಮೇಲೆ ದಯಾನಂದ್ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಪುರಸಭೆ ಕಚೇರಿಯಲ್ಲೇ ಈ ಘಟನೆ ನಡೆದಿದ್ದು, ದಯಾನಂದ್ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತುಮಕೂರು(ಡಿ.17): ನಗರದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಬಾಬು ಸಹೋದರ ಸಿ.ಟಿ ದಯಾನಂದ್ ಗೂಂಡಾಗಿರಿ ಪ್ರದರ್ಶಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಾಕಿರುವ ಫ್ಲೆಕ್ಸ್ ಬಗ್ಗೆ ಮಾಹಿತಿ ಕೇಳಲು ಬಂದ ವಕೀಲ ಮಂಜುನಾಥ್ ಮೇಲೆ ದಯಾನಂದ್ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಪುರಸಭೆ ಕಚೇರಿಯಲ್ಲೇ ಈ ಘಟನೆ ನಡೆದಿದ್ದು, ದಯಾನಂದ್ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಶಾಸಕನ ಸಹೋದರನ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆಗೊಳಗಾದ ವಕೀಲ ಮಂಜುನಾಥ್, ನಿನ್ನೆ ಪುರಸಭೆ ಹೋಗಿ ತಮ್ಮದೊಂದು ಫ್ಲೆಕ್ಸ್ ಹಾಕಲು ಕಟ್ಟಬೇಕಾದ ಹಣದ ಬಗ್ಗೆ ವಿಚಾರಿಸಲು ತೆರಳಿದ್ದಾರೆ. ಆಗ ಅಲ್ಲೇ ಇದ್ದ ದಯಾನಂದ್ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ಹಿಂದೆಯೂ ಸಹ ದಯಾನಂದ್ ಸಾಕಷ್ಟು ಜನರ ಮೇಲೆ ಗೂಂಡಾಗಿರಿ ನಡೆಸಿರೋ ಉದಾಹರಣೆಗಳಿವೆಯಂತೆ.