Asianet Suvarna News Asianet Suvarna News

ದೆಹಲಿ, ಮಹಾರಾಷ್ಟ್ರ, ಚಂಡೀಗಡ ಆಯ್ತು, ಬೆಂಗಳೂರಿನಲ್ಲೂ ಪಟಾಕಿ ನಿಷೇಧಿಸಬೇಕಾ?

ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತೆ ಅನ್ನೋ ಕಾರಣಕ್ಕಾಗಿ ಸುಪ್ರೀಂಕೋರ್ಟ್​ ದೆಹಲಿಯಲ್ಲಿ ಪಟಾಕಿ ಮಾರಬಾರದು ಅಂತಾ ಆದೇಶ ಹೊರಡಿಸಿದೆ.

Is it necessary to ban crackers in bangalore

ಬೆಂಗಳೂರು(ಅ. 11): ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತೆ ಅನ್ನೋ ಕಾರಣಕ್ಕಾಗಿ ಸುಪ್ರೀಂಕೋರ್ಟ್​ ದೆಹಲಿಯಲ್ಲಿ ಪಟಾಕಿ ಮಾರಬಾರದು ಅಂತಾ ಆದೇಶ ಹೊರಡಿಸಿದೆ.

ಇದಕ್ಕೆ ಈಗಾಗಲೇ ಪರ ವಿರೋಧ ವ್ಯಕ್ತವಾಗಿದೆ. ಅಲ್ಲದೆ ದೊಡ್ಡ ಚರ್ಚೆಗೂ ನಾಂದಿ ಹಾಡಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ, ಚಂಡೀಗಡದಲ್ಲೂ ಪಟಾಕಿ ನಿಷೇಧ ಮಾಡುವ ಕುರಿತು ಒಲವು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲೂ ಸುವರ್ಣನ್ಯೂಸ್ ಪಟಾಕಿ ಬ್ಯಾನ್ ಆಗ್ಬೇಕ್ ಅನ್ನೋ ಅಭಿಯಾನ ಶುರು ಮಾಡಿದೆ.

ಇವತ್ತು ಇಡೀ ದಿನ ಪಟಾಕಿ ಬ್ಯಾನ್​ ಆಗ್ಬೇಕು ಅನ್ನೋದರ ಕುರಿತು ಅಭಿಯಾನ ನಡೆಯಲಿದೆ. ನೀವು ಕೂಡಾ ದೆಹಲಿಯಲ್ಲಿ ಆದಂತೆ ಬೆಂಗಳೂರಿನಲ್ಲೂ ಪಟಾಕಿ ನಿಷೇಧ ಮಾಡಬೇಕೋ ಬೇಡವೋ ಅನ್ನೋದರ ಬಗ್ಗೆ ಅಭಿಪ್ರಾಯ ಸಲ್ಲಿಸಬಹುದು.

Follow Us:
Download App:
  • android
  • ios