ಇಂದ್ರಾಣಿ ಮುಖರ್ಜಿಗೆ ಕಾಡಿದೆಯಂತೆ ಜೈಲಲ್ಲಿ ಜೀವಭಯ
ಶೀನಾ ಬೋರಾ ಕೊಲೆ ಪ್ರಕರಣದ ಮುಖ್ಯ ಆರೋಪಿ ಇಂದ್ರಾಣಿ ಮುಖರ್ಜಿ ತಮಗೆ ಜೈಲಿನಲ್ಲಿ ಜೀವಭಯವಿದೆ ಎಂದು ದೂರಿದ್ದಾರೆ.
ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಮುಖ್ಯ ಆರೋಪಿ ಇಂದ್ರಾಣಿ ಮುಖರ್ಜಿ ತಮಗೆ ಜೈಲಿನಲ್ಲಿ ಜೀವಭಯವಿದೆ ಎಂದು ದೂರಿದ್ದಾರೆ.
ಅನಾರೋಗ್ಯ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಮುಖರ್ಜಿ ಬಿಡುಗಡೆಯಾದ ಬಳಿಕ ತಮ್ಮ ಆತಂಕ ಹೊರಹಾಕಿದ್ದಾರೆ. ಆಸ್ಪತ್ರೆಯಿಂದ ಹೊರಬಂದ ಬಳಿಕ ವರದಿಗಾರೊಬ್ಬರ ಪ್ರಶ್ನೆಯೊಂದಕ್ಕೆ ಜೈಲಲ್ಲಿ ಜೀವ ಭೀತಿ ಎಂದಷ್ಟೇ ಇಂದ್ರಾಣಿ ಹೇಳಿದ್ದಾರೆ.