ರೈಲುಗಳ ಮೇಲೆ ಕಾರ್ಗಿಲ್ ಸಾಹಸ!
ರೈಲುಗಳ ಮೇಲೆ ಕಾರ್ಗಿಲ್ ಯುದ್ಧದ ಸಾಹಸ ಚಿತ್ರಗಳು| ವಿನೈಲ್ ಸ್ಟಿಕ್ಕರ್ ಅಂಟಿಸಿ ಜನರಿಗೆ ಮಾಹಿತ| ವೀರಯೋಧರ ಸ್ಮರಣಾರ್ಥ ಈ ಕಾರ್ಯ
ನವದೆಹಲಿ[ಜು.16]: ಕಾರ್ಗಿಲ್ ವಿಜಯೋತ್ಸವದ 20 ನೇ ವರ್ಷಾಚರಣೆ ಅಂಗವಾಗಿ ಮತ್ತು ಯುದ್ಧದ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಲು ದೆಹಲಿ- ವಾರಾಣಸಿ ಕಾಶಿ ವಿಶ್ವನಾಥ ಎಕ್ಸ್ಪ್ರೆಸ್ ರೈಲಿಗೆ ಕಾರ್ಗಿಲ್ ಯುದ್ಧದ ಘಟನೆಗಳು ಮತ್ತು ಸೈನಿಕರ ಸಾಹಸಮಯ ಚಿತ್ರಗಳನ್ನು (ವಿನೈಲ್ ಸ್ಟಿಕ್ಕರ್)ಅಂಟಿಸಲಾಗಿದೆ.
Delhi: Union Minister Dr Harsh Vardhan, Minister of State (MoS) for Railways Suresh Angadi & BJP MP Meenakashi Lekhi flagged off vinyl wrapped rake commemorating train today at New Delhi Railway Station, on the occasion of Kargil Vijay Diwas. pic.twitter.com/0IlRlC5lb6
— ANI (@ANI) July 15, 2019
ಕೇಂದ್ರ ಆರೋಗ್ಯ ಖಾತೆ ಸಚಿವ ಹರ್ಷವರ್ಧನ್, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ರೈಲು ಓಡಾಟಕ್ಕೆ ಸೋಮವಾರ ಚಾಲನೆ ನೀಡಿದರು. ಈ ವೇಳೆ ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.
Flagged off a vinyl wrapped train from New Delhi Railway Station carrying the message of extreme courage & sacrifice by our armed forces during the Kargil war that will reach the remote villages, towns & cities conjuring respect & gratitude for our brave soldiers. pic.twitter.com/Buom5F6sqR
— Suresh Angadi (@SureshAngadi_) July 15, 2019
ಕಾರ್ಗಿಲ್ ಯುದ್ಧದ ರೋಚಕ ಘಟನೆಗಳು ಮತ್ತು ಸೈನಿಕರ ಸಾಹಸಗಳನ್ನು ಜನಸಾಮಾನ್ಯರಿಗೆ ತಿಳಿಸಲು ಬ್ರಹ್ಮಪುತ್ರ ಮೇಲ್, ಸೀಮಾಂಚಲ್ ಎಕ್ಸಪ್ರೆಸ್, ಗೊಂಡ್ವಾನಾ ಎಕ್ಸಪ್ರೆಸ್, ಗೋವಾ ಸಂಪರ್ಕ ಕ್ರಾಂತಿ ಎಕ್ಸಪ್ರೆಸ್ ಸೇರಿ 10 ರೈಲುಗಳಿಗೆ ಈ ರೀತಿಯಾದ ಚಿತ್ರ ಅಂಟಿಸಲಾಗುತ್ತಿದೆ. ಈ ಪೈಕಿ ಕಾಶಿ ವಿಶ್ವನಾಥ ಎಕ್ಸಪ್ರೆಸ್ ರೈಲು ಮೊದಲನೆಯದಾಗಿದೆ.