ನಮ್ಮದೇ ತಪ್ಪು.. ಮಹತ್ವದ ಸವಲತ್ತು ಕಡಿತ ಮಾಡಿದ ರೈಲ್ವೆ ಇಲಾಖೆ
ಸಾರ್ವಜನಿಕ ಆಸ್ತಿಗಳನ್ನು ಶುಚಿಯಾಗಿ ಇಟ್ಟುಕೊಳ್ಳದ್ದಕ್ಕೆ ನಮಗೆ ನಾವೇ ಶಿಕ್ಷೆ ಕೊಟ್ಟಿಕೊಂಡಂತಾಗಿದೆ. ಭಾರತೀಯ ರೈಲ್ವೆ ಪ್ರಯಾಣಿಕರಿಗೆ ನೀಡಿದ್ದ ಸವಲತ್ತೊಂದನ್ನು ಕಡಿತ ಮಾಡಲು ಮುಂದಾಗಿದೆ.
ನವದೆಹಲಿ[ಅ.15] ಭಾರತೀಯ ರೈಲ್ವೆ ಇಲಾಖೆಗೆ ಈಗ 2ಎಸಿ ಕೋಚ್ ಗಳಲ್ಲಿ ಅಳವಡಿಸಿರುವ ಕರ್ಟನ್ ಗಳನ್ನು ಶುಚಿಗೊಳಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಇನ್ನು ಮುಂದೆ ಕರ್ಟನ್ ತೆಗೆಯಲಾಗುವುದು ಎಂದು ಹೇಳಿದೆ.
ಪ್ರಯಾಣಿಕರ ಖಾಸಗಿತನಕ್ಕೆ ಒತ್ತು ಕೊಟ್ಟು, ಈ ಸೌಲಭ್ಯ ನೀಡಿದ್ದರೆ, ಹೆಚ್ಚಿನವರು ಇದನ್ನು ಕರವಸ್ತ್ರ, ಟವೆಲ್ ಇಲ್ಲವೇ ಶೂ ಒರೆಸಲು ಬಳಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಸಹ ರೈಲ್ವೆ ಇಲಾಖೆಯ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಹೊತ್ತೊಯ್ದಿದ್ದು ಸುದ್ದಿಯಾಗಿತ್ತು.
ಬೆಂಗಳೂರು-ನಾಂದೇಡ್ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಅವಘಡ ಆದ ಮೇಲೆ 2014ರಲ್ಲಿ ಎಸಿ3 ವಿಭಾಗದಲ್ಲಿ ಕರ್ಟನ್ ತೆಗೆಯಲಾಗಿತ್ತು. ಅನೇಕ ಸಾರಿ ಎಚ್ಚರಿಕೆ ಮತ್ತು ಸೂಚನೆ ನೀಡಿದ್ದರೂ ಜನರು ಬುದ್ಧಿ ಕಲಿತಿಲ್ಲ.
ಭಾರತ ಕಂಡ 4 ಅತಿದೊಡ್ಡ ರೈಲು ದರೋಡೆಗಳು..ಒಟ್ಟು ಮೌಲ್ಯ!
ತೀರಾ ಖಾಸಗಿತನ ಬಯಸುವ ಪ್ರಯಾಣಿಕರು 1 ಎಸಿ ಮೂಲಕ ಪ್ರಯಾಣಿಸುತ್ತಾರೆ. ಅಲ್ಲಿ ಅವರಿಗೆ ಹೇಗೂ ಕ್ಯಾಬಿನ್ ವ್ಯವಸ್ಥೆ ಇರುವುದರಿಂದ ಖಾಸಗಿತನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಅದೇ ಕೊಳಕಾದ ಕರ್ಟನ್ ಗಳಿಂದ ಪ್ರಯಾಣಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದರಿಂದ ಕರ್ಟನ್ ತೆರವುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.