Asianet Suvarna News Asianet Suvarna News

ಯೋಧರತ್ತ ಕಲ್ಲೆಸೆವಾಗ ಸಾಯಿರಿ ಎನ್ನಲೇ?: ಸೇನಾ ಮುಖ್ಯಸ್ಥರ ಗುಡುಗು

ಕಲ್ಲು ತೂರಾಟಗಾರನೊಬ್ಬನನ್ನು ಮಾನವ ತಡೆಗೋಡೆಯಾಗಿ ಬಳಸಿಕೊಂಡು ಕಾಶ್ಮೀರದಲ್ಲಿ ಚುನಾವಣಾಧಿಕಾರಿಗಳು ಹಾಗೂ ಯೋಧರನ್ನು ರಕ್ಷಿಸಿದ ಮೇಜರ್‌ ಲೀತುಲ್‌ ಗೊಗೊಯ್‌ ಅವರಿಗೆ ಗೌರವ ಸಮರ್ಪಿಸಿದ್ದನ್ನು ಭೂಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ‘ಕೊಳಕು ಸಮರ'ವನ್ನು ಭಾರತೀಯ ಸೇನೆ ಎದುರಿಸುತ್ತಿದೆ. ಆ ಸಮರವನ್ನು ‘ನವೀನ ವಿಧಾನ'ಗಳ ಮೂಲಕವೇ ಎದುರಿಸಬೇಕು. ಹೀಗಾಗಿ ಗೊಗೊಯ್‌ ಅವರನ್ನು ಗೌರವಿಸಿದ್ದೇವೆ ಎಂದು ಹೇಳಿದ್ದಾರೆ.

Indian Army chief Bipin Rawat defends use of human shield in Kashmir

ನವದೆಹಲಿ(ಮೇ.29): ಕಲ್ಲು ತೂರಾಟಗಾರನೊಬ್ಬನನ್ನು ಮಾನವ ತಡೆಗೋಡೆಯಾಗಿ ಬಳಸಿಕೊಂಡು ಕಾಶ್ಮೀರದಲ್ಲಿ ಚುನಾವಣಾಧಿಕಾರಿಗಳು ಹಾಗೂ ಯೋಧರನ್ನು ರಕ್ಷಿಸಿದ ಮೇಜರ್‌ ಲೀತುಲ್‌ ಗೊಗೊಯ್‌ ಅವರಿಗೆ ಗೌರವ ಸಮರ್ಪಿಸಿದ್ದನ್ನು ಭೂಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ‘ಕೊಳಕು ಸಮರ'ವನ್ನು ಭಾರತೀಯ ಸೇನೆ ಎದುರಿಸುತ್ತಿದೆ. ಆ ಸಮರವನ್ನು ‘ನವೀನ ವಿಧಾನ'ಗಳ ಮೂಲಕವೇ ಎದುರಿಸಬೇಕು. ಹೀಗಾಗಿ ಗೊಗೊಯ್‌ ಅವರನ್ನು ಗೌರವಿಸಿದ್ದೇವೆ ಎಂದು ಹೇಳಿದ್ದಾರೆ.

'ಈ ಮೂಲಕ ಕಾಶ್ಮೀರದಲ್ಲಿ ಮಿತಿಮೀರಿರುವ ಪಾಕ್‌ ಪರ ಪ್ರತ್ಯೇಕತಾವಾದಿ ಹೋರಾಟಗಾರರನ್ನು ಮತ್ತಷ್ಟುದಿಟ್ಟತನದಿಂದ ಎದುರಿಸುವ ಸುಳಿವನ್ನು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅವರು ನೀಡಿದ್ದಾರೆ.

ಪಿಟಿಐ ಸುದ್ದಿಸಂಸ್ಥೆ ಸಿಬ್ಬಂದಿ ಜತೆ ಸಂವಾದ ನಡೆಸಿರುವ ಅವರು, ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ‘ಜನರು ನಮ್ಮತ್ತ ಕಲ್ಲು ತೂರುತ್ತಿದ್ದಾರೆ. ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯುತ್ತಿದ್ದಾರೆ. ಈಗ ಏನು ಮಾಡಬೇಕು ಎಂದು ನಮ್ಮ ಯೋಧರು ನನ್ನನ್ನು ಕೇಳಿದರೆ, ಸ್ವಲ್ಪ ಹೊತ್ತು ಕಾದು, ಸಾಯಿರಿ ಎಂದು ಹೇಳಲೇ? ರಾಷ್ಟ್ರಧ್ವಜವನ್ನು ಹೊದ್ದ ಸುಂದರ ಶವಪೆಟ್ಟಿಗೆಯನ್ನು ತಂದು ನಿಮ್ಮ ದೇಹಗಳನ್ನು ಗೌರವದೊಂದಿಗೆ ತವರಿಗೆ ಕಳುಹಿಸಿಕೊಡುವೆ ಎಂದು ತಿಳಿಸಲೇ? ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ ಯೋಧರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ನಾನು ಮಾಡಬೇಕಾಗುತ್ತದೆ. ಮೇಜರ್‌ ಗೊಗೊಯ್‌ ಅವರನ್ನು ಸನ್ಮಾನಿಸುವ ಮೂಲಕ ನಾನು ಅದನ್ನೇ ಮಾಡಿದ್ದೇನೆ' ಎಂದು ಸಮರ್ಥಿಸಿಕೊಂಡಿದ್ದಾರೆ.

ಕಾಶ್ಮೀರದಲ್ಲಿ ನಡೆಯುತ್ತಿರುವುದು ಪರೋಕ್ಷ ಸಮರ. ಪರೋಕ್ಷ ಸಮರ ಎಂದರೆ ‘ಕೊಳಕು ಯುದ್ಧ'. ಅದನ್ನು ಕೊಳಕು ವಿಧಾನದಲ್ಲೇ ನಡೆಸಲಾಗುತ್ತದೆ. ಭಯೋತ್ಪಾದನೆ ಪೀಡಿತವಾಗಿರುವ ರಾಜ್ಯದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ಅಧಿಕಾರಿಗಳ ನೈತಿಕ ಬಲ ಹೆಚ್ಚಿಸುವ ಮುಖ್ಯ ಉದ್ದೇಶದೊಂದಿಗೆ ಮೇಜರ್‌ ಲೀತುಲ್‌ ಗೊಗೊಯ್‌ ಅವರನ್ನು ಗೌರವಿಸಿದ್ದಾಗಿ ಎಂದು ತಿಳಿಸಿದ್ದಾರೆ.

‘ಸೇನೆಯ ನೈತಿಕ ಸ್ಥೈರ್ಯ ಸೇನಾ ಮುಖ್ಯಸ್ಥನಾಗಿರುವ ನನ್ನ ಪ್ರಮುಖ ಕಾಳಜಿ. ಅದೇ ನನ್ನ ಕೆಲಸ. ಯುದ್ಧ ಭೂಮಿಯಿಂದ ನಾನು ಬಹುದೂರ ಇರುತ್ತೇನೆ.

ಅಲ್ಲಿರುವ ಪರಿಸ್ಥಿತಿಯ ಮೇಲೆ ನಾನು ಪ್ರಭಾವ ಬೀರಲು ಆಗುವುದಿಲ್ಲ. ನಾನು ನಿಮ್ಮ ಜತೆ ಇದ್ದೇನೆ ಎಂದು ಯೋಧರಿಗೆ ಹೇಳಬಹುದಷ್ಟೇ. ಪರಿಸ್ಥಿತಿ ಕಠಿಣವಾಗ ಬಹುದು ಎಂದು ನಮ್ಮವರಿಗೆ ಹೇಳುತ್ತಲೇ ಇರುತ್ತೇನೆ. ಒಂದು ವೇಳೆ ಪರಿಸ್ಥಿತಿ ಬಿಗಡಾ ಯಿಸಿದರೆ, ಉದ್ದೇಶ ಕೆಟ್ಟದ್ದು ಅಲ್ಲದಿದ್ದರೆ ನಾನು ನಿಮ್ಮ ಜತೆ ಇರುತ್ತೇನೆ ಎಂದೂ ತಿಳಿಸಿರುತ್ತೇನೆ' ಎಂದು ವಿವರಿಸಿದ್ದಾರೆ.

ವಿವಿಧ ಭದ್ರತಾ ಪಡೆಗಳ ನಡುವೆ ಪರಸ್ಪರ ನಂಬಿಕೆ ಇದೆ. ಅದನ್ನು ಮುರಿದು ಹಾಕುವ ಸಂಚು ಕಾಶ್ಮೀರದಲ್ಲಿ ನಡೆಯುತ್ತಿದೆ. ಚುನಾವಣಾ ಸಿಬ್ಬಂದಿ ಭದ್ರತೆಗೆ ಮೊರೆ ಇಟ್ಟಾಗ ಮೇಜರ್‌ ಗೊಗೊಯ್‌ ಅವರು ಅದನ್ನು ನಿರಾಕರಿಸಲು ಆಗುತ್ತಿರಲಿಲ್ಲ. ನಾಳೆ ಅನಂತನಾಗ್‌ ಕ್ಷೇತ್ರಕ್ಕೆ ಚುನಾವಣೆ ನಡೆಯಬಹುದು.

ಇದೇ ಪರಿಸ್ಥಿತಿ ಮರುಕಳಿಸಬಹುದು. ನೆರವಿಗೆ ಕೋರಿಕೆ ಬಂದಾಗ ಸೇನೆ ಪ್ರತಿಕ್ರಿಯಿಸದೇ ಹೋದರೆ, ನಾವು ರಕ್ಷಣೆ ನೀಡುತ್ತಿರುವ ಜನರು, ಪೊಲೀಸರು ಹಾಗೂ ಸೇನೆ ನಡುವಣ ನಂಬಿಕೆಯೇ ಹಾಳಾಗಿ ಬಿಡುತ್ತದೆ. ಅದಕ್ಕೆ ಅವಕಾಶ ಕೊಡಲು ಆಗದು. ಆದರೆ ಉಗ್ರಗಾಮಿಗಳಿಗೆ ಬೇಕಾಗಿ ರುವುದು ಅದೇ ಎಂದು ಹೇಳಿದ್ದಾರೆ.

ಶಸ್ತ್ರ ಬಳಸಿದರೆ ಸಂತಸ ಆಗ್ತಿತ್ತು!:

 

‘ಕಾಶ್ಮೀರಿ ಜನ ಕಲ್ಲು ತೂರುವ ಬದಲು ಶಸ್ತ್ರಾಸ್ತ್ರ ಬಳಸಿ ದಾಳಿ ನಡೆಸಿದ್ದರೆ ನಮಗೆ ಸಂತೋಷವಾಗುತ್ತಿತ್ತು! ಆಗ ಏನು ಮಾಡಬೇಕಿತ್ತೋ ಅದನ್ನು ಮಾಡಬಹು ದಾಗಿತ್ತು' ಎಂದು ಹೇಳಿದ್ದಾರೆ. ದೇಶದ ಜನರು ಸೇನೆ ಮೇಲಿನ ಹೆದರಿಕೆಯನ್ನು ಕಳೆದುಕೊಂಡರೆ ದೇಶವೇ ಹಾಳಾಗುತ್ತದೆ.

ನಾವು ಸ್ನೇಹಪರ ಸೇನೆ. ಕಾನೂನು- ಸುವ್ಯವಸ್ಥೆ ಪುನಾಸ್ಥಾಪಿಸಲು ಬುಲಾವ್‌ ಬಂದರೆ, ನಮ್ಮ ಬಗ್ಗೆ ಜನರು ಹೆದರಲೇಬೇಕಾಗುತ್ತದೆ. ಆದಾಗ್ಯೂ ಗರಿಷ್ಠ ತಾಳ್ಮೆಯನ್ನು ಕಾಶ್ಮೀರದಲ್ಲಿ ವಹಿಸಲಾಗುತ್ತಿದೆ ಎಂದು ಕಾಶ್ಮೀರದಲ್ಲಿ ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ರಾವತ್‌ ತಿಳಿಸಿದ್ದಾರೆ.

4 ಜಿಲ್ಲೆಗಳಲ್ಲಿ ಮಾತ್ರ ಸಮಸ್ಯೆ:

‘ಕಾಶ್ಮೀರದಾದ್ಯಂತ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ಹೇಳುವುದು ತಪ್ಪು. ದಕ್ಷಿಣ ಕಾಶ್ಮೀರದ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಸಮಸ್ಯೆ ಇದೆ. ಈಗ ಗದ್ದಲ ಮಾಡುತ್ತಿರು ವವರು, ಯುವ ಸೇನಾಧಿಕಾರಿ ಲೆಫ್ಟಿನಂಟ್‌ ಉಮರ್‌ ಫಯಾಜ್‌ ಅವರು ರಜೆ ಮೇಲಿದ್ದಾಗ ಹತ್ಯೆಗೀಡಾಗಿದ್ದರ ಬಗ್ಗೆ ಏಕೆ ಏನೂ ಮಾತನಾಡುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಜತೆ ಸೀಮಿತ ಯುದ್ಧದ ಸಂಭವವನ್ನು ತಾವು ನಿರೀಕ್ಷಿಸಿಲ್ಲ ಎಂದಿದ್ದಾರೆ.

Follow Us:
Download App:
  • android
  • ios