Asianet Suvarna News Asianet Suvarna News

ಕಣಿವೆಯಲ್ಲಿ 'ಅಮಾನವೀಯ ವರ್ತನೆ': ವಿಶ್ವಸಂಸ್ಥೆ ವರದಿಗೆ ಭಾರತ ವಿರೋಧ!

ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ವರದಿ ಬಹಿರಂಗ| ಕಣಿವೆಯಲ್ಲಿ ಮಾನವ ಹಕ್ಕು ಉಲ್ಲಂಘನೆ ಎಂದ ಸಮಿತಿ| ವರದಿ ಕಂಡು ಕೆರಳ ಕೆಂಡಾಮಂಡಲವಾದ ಭಾರತ| ವಿಶ್ವಸಂಸ್ಥೆಯ ವರದಿಗೆ ಭಾರತದ ತೀವ್ರ ವಿರೋಧ| ಭಯೋತ್ಪಾದನೆಯನ್ನು ಕಾನೂನುಬದ್ಧಗೊಳಿಸುವ ಪ್ರಯತ್ನ ಎಂದ ಭಾರತ| ಮಾನವ ಹಕ್ಕು ಸಮಿತಿ ವರದಿ ತಿರಸ್ಕರಿಸಿದ ವಿದೇಶಾಂಗ ಇಲಾಖೆ|

India Protests UN Body Report On Kashmir
Author
Bengaluru, First Published Jul 8, 2019, 4:29 PM IST

ನವದೆಹಲಿ(ಜು.08): ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ನೀಡಿರುವ ವರದಿಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ಮತ್ತು ಸೇನೆಯಿಂದ ಮಾನವ ಹಕ್ಕು ಉಲ್ಲಂಘನೆಯಾಗಿದ್ದು, ಈ ಕುರಿತು ವಿಶ್ವ ಸಮುದಾಯ ಗಮನ ಹರಿಸುವ ಅವಶ್ಯಕತೆ ಇದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ವರದಿ ಮಾಡಿದೆ.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಭಾರತ, ಮಾನವ ಹಕ್ಕುಗಳ ನೆರಳಲ್ಲಿ ಭಯೋತ್ಪಾದನೆಯನ್ನು ಕಾನೂನುಬದ್ಧಗೊಳಿಸುವ ಅಪಾಯ ಎದುರಾಗಿದೆ ಎಂದು ಗಂಭೀರ ಆರೋಪ ಮಾಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ, ಭಾರತದ ಆಂತರಿಕ ವಿಷಯದಲ್ಲಿ ವಿಶ್ವಸಂಸ್ಥೆ ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವುದು ಒಪ್ಪಲು ಸಾಧ್ಯವಿಲ್ಲ ಎಂದು ಖಾರವಾಗಿ ನುಡಿದಿದೆ.

Follow Us:
Download App:
  • android
  • ios