ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮಾನವನ್ನು ಹರಾಜು ಹಾಕಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್'ಗೆ ಪಾಕ್ ಪ್ರತ್ಯುತ್ತರ ನೀಡಿದೆ. ದಕ್ಷಿಣ ಏಷಿಯಾದಲ್ಲಿ ಭಾರತ ಭಯೋತ್ಪಾದನೆಯ ತಾಯಿ. ಜನಾಂಗೀಯ ಹಾಗೂ ಫ್ಯಾಸಿಸ್ಟ್ ಸಿದ್ಧಾಂತಗಳು ನರೇಂದ್ರ ಮೋದಿ ಸರ್ಕಾರದಲ್ಲಿ ಮಿಳಿತವಾಗಿದೆ ಎಂದು ಪಾಕ್ ರಾಯಭಾರಿ ಮಲೀಹಾ ಲೋಧಿ ಹೇಳಿದ್ದಾರೆ.

ನವದೆಹಲಿ (ಸೆ.24): ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮಾನವನ್ನು ಹರಾಜು ಹಾಕಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್'ಗೆ ಪಾಕ್ ಪ್ರತ್ಯುತ್ತರ ನೀಡಿದೆ. ದಕ್ಷಿಣ ಏಷಿಯಾದಲ್ಲಿ ಭಾರತ ಭಯೋತ್ಪಾದನೆಯ ತಾಯಿ. ಜನಾಂಗೀಯ ಹಾಗೂ ಫ್ಯಾಸಿಸ್ಟ್ ಸಿದ್ಧಾಂತಗಳು ನರೇಂದ್ರ ಮೋದಿ ಸರ್ಕಾರದಲ್ಲಿ ಮಿಳಿತವಾಗಿದೆ ಎಂದು ಪಾಕ್ ರಾಯಭಾರಿ ಮಲೀಹಾ ಲೋಧಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಅಂತರಾಷ್ಟ್ರೀಯ ಸಮುದಾಯಗಳು ಭಾರತ-ಪಾಕಿಸ್ತಾನ ನಡುವಿನ ಅಪಾಯವನ್ನು ತಡೆಯಲು ಇಚ್ಚಿಸುವುದಾದರೆ ಮೊದಲು ಭಾರತದ ಪ್ರಚೋದನಾಕಾರಿ ಹಾಗೂ ಆಕ್ರಮಣಕಾರಿ ನಡೆಯನ್ನು ತಡೆಯಬೇಕು. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇದನ್ನು ನಿಯಂತ್ರಿಸಬೇಕು. ಪಾಕಿಸ್ತಾನದ ವಿರುದ್ಧ ಭಯೋತ್ಪಾದಕ ಸಂಘಟನೆಗಳಿಗೆ ಭಾರತ ಸ್ಪಾನ್ಸರ್ ಮಾಡುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಪಾಕ್ ಹೇಳಿದೆ.