ದಿಲ್ಲಿ ಜನರ ಬಗ್ಗೆ ಗಡ್ಕರಿಗೆ ಯಾಕೆ ಬೇಜಾರು? ಮಂಚ ಮುರಿದುಬಿದ್ದ ಪ್ರಸಂಗ ನೆನಪಿಸಿಕೊಂಡ ಗಡ್ಕರಿ
* ದಿಲ್ಲಿಯ ಜನರು ಬಹಳ ಟೊಪ್ಪಿ ಹಾಕ್ತಾರೆ ಎಂಬುದು ನಿತಿನ್ ಗಡ್ಕರಿಯವರ ವೈಯಕ್ತಿಕ ಬೇಸರ
* 30 ವರ್ಷದ ಹಿಂದಿನ ತಮ್ಮ ಫರ್ನಿಚರ್ ವ್ಯಾಪಾರದ ಘಟನೆಯೊಂದನ್ನು ಸ್ಮರಿಸಿದ ಗಡ್ಕರಿ
* ದಿಲ್ಲಿಯಿಂದ ತರಿಸಿದ ಮಂಚದ ಕಥೆ ಏನಾಯ್ತು?
ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ
ಕೇಂದ್ರ ಸಚಿವ ನಿತಿನ್ ಗಡ್ಕರಿ ಪತ್ರಕರ್ತರ ಜೊತೆ ಹರಟೆ ಹೊಡೆಯಲು ಕುಳಿತರೆ ತಿಂಡಿಗೆ ಮತ್ತು ಜೋಕ್ಸ್'ಗಳಿಗೆ ಎಂದಿಗೂ ಬರವಿಲ್ಲ. ಬಿಸಿ ಬಿಸಿ ಜಿಲೇಬಿಯಿಂದ ಹಿಡಿದು ಮಹಾರಾಷ್ಟ್ರದ ಪೂರನ್ ಪೋಳಿವರೆಗೆ ಎಲ್ಲವನ್ನೂ ತರಿಸಿ ಪ್ರೀತಿಯಿಂದ ತಿನ್ನಿಸುವ ಗಡ್ಕರಿ ಈಗ ಸಾಕಷ್ಟು ಡಯಟ್ ಮಾಡುತ್ತಾರಾದರೂ, ಪೂರ್ತಿ ಬಿಡಬಾರದು ಸ್ವಲ್ಪ ಸ್ವಲ್ಪ ತಿನ್ನಬೇಕು. ನೀವು ತಿನ್ನಿ ನಾನು ತಿನ್ನುತ್ತೇನೆ ಎಂದು ಮೂಡ್ ಇದ್ದರೆ ಪತ್ರಕರ್ತರ ಜೊತೆ ಹರಟೆ ಹೊಡೆಯುತ್ತಾರೆ. ಗಡ್ಕರಿ ಸಾಹೇಬರಿಗೆ ದಿಲ್ಲಿ ಎಂದರೆ ಸೇರುವುದಿಲ್ಲವಂತೆ. ದಿಲ್ಲಿ ಜನ ಬಹಳ ಟೊಪ್ಪಿ ಹಾಕುವ ಪ್ರವೃತ್ತಿ. ಇದಕ್ಕೆ ಬಿಜೆಪಿ ನಾಯಕರು ಹೊರತಲ್ಲ ಎನ್ನುತ್ತಾರೆ. ಗಡ್ಕರಿ 30 ವರ್ಷದ ಹಿಂದೆ ನಾಗಪುರದಲ್ಲಿ ಫರ್ನಿಚರ್ ವ್ಯಾಪಾರ ಮಾಡುತ್ತಿದ್ದರಂತೆ. ದಿಲ್ಲಿಯಿಂದ ಫರ್ನಿಚರ್ ತರಿಸಿ ನಾಗಪುರ ವಿದರ್ಭದಲ್ಲಿ ಮಾರುವುದು. ಗಡ್ಕರಿ ಅಂಗಡಿಗೆ ಬಂದ ಹೊಸದಾಗಿ ಮದುವೆಯಾದ ಹುಡುಗನೊಬ್ಬ ಮಂಚ ತೆಗೆದುಕೊಂಡು ಹೋದನಂತೆ. ಎರಡೇ ದಿನಕ್ಕೆ, ಎಂಥದ್ದು ಕೊಟ್ಟಿದ್ದೀರಿ ಮಂಚ ಮುರಿದು ಹೋಯಿತು ಎಂದು ಬಂದನಂತೆ. ಆವಾಗಿನಿಂದ ದೆಹಲಿ ವ್ಯವಹಾರ ನಿಲ್ಲಿಸಿದರಂತೆ. ಗಡ್ಕರಿ ಪ್ರಕಾರ ವ್ಯಾಪಾರದಿಂದ ಹಿಡಿದು ಪಾಲಿಟಿಕ್ಸ್'ವರೆಗೆ ದೆಹಲಿ ಜನ ಟೊಪ್ಪಿಗೆ ಹಾಕುವುದು ಜಾಸ್ತಿ. ಎಚ್ಚರಿಕೆಯಿಂದ ಇರಬೇಕಂತೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್
epaperkannadaprabha.com
--------
ಇಂಡಿಯಾ ಗೇಟ್ ಪೂರ್ಣ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ
ಇವನ್ನೂ ಓದಿ:
* ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿ ಬೇರೆ ರಾಜ್ಯದ ಚುನಾವಣೆಯತ್ತ ರಾಜಕಾರಣಿಗಳ ಲಕ್ಷ್ಯ
* ರಾಹುಲ್'ಗೆ ಪಟ್ಟ; ಸೋನಿಯಾ ಕನ್'ಫ್ಯೂಷನ್; ಕಾರಣ ಏನು?
* ಕಾಂಗ್ರೆಸ್ ಗೆದ್ದರೆ ಆಂಜನೇಯ ಉಪಮುಖ್ಯಮಂತ್ರಿ?
* ಗುಜರಾತ್'ನಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಹೇಗೆ ನಡೆಯುತ್ತೆ?
* ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಅಖಾಡಕ್ಕಿಳಿಯಲಿರುವ 250 ಪ್ರಬಲ ಆರೆಸ್ಸೆಸ್ ವಿಸ್ತಾರಕರು
* ದಿಲ್ಲಿ ಜನರ ಬಗ್ಗೆ ಗಡ್ಕರಿಗೆ ಯಾಕೆ ಬೇಜಾರು? ಮಂಚ ಮುರಿದುಬಿದ್ದ ಪ್ರಸಂಗ ನೆನಪಿಸಿಕೊಂಡ ಗಡ್ಕರಿ
* ಟಿಪ್ಪು ಹೊಗಳಿದ ರಾಷ್ಟ್ರಪತಿಗೆ ಆ ಭಾಷಣ ಬರೆದುಕೊಟ್ಟವರಾರು? ಇಲ್ಲಿದೆ ಸೀಕ್ರೆಟ್