‘ರಕ್ತ ಕುದಿಯೋದು ಆರಬೇಕು ಅಂದ್ರೆ ಪೂರ್ಣ ಕಾಶ್ಮೀರ ನಮ್ಮದಾಗಬೇಕು’
ಭಾರತೀಯ ಯೋಧರು ಪಾಕಿಸ್ತಾನದ ಗಡೊಇಯೊಳಕ್ಕೆ ನುಗ್ಗಿ ದಾಳಿ ಮಾಡಿ ಹಿಂದುರುಗಿದ ನಂತರದಲ್ಲಿ ರಾಜಕಾರಣದ ನಾಯಕರು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ.
ತುಮಕೂರು[ಫೆ. 26] ದೇಶದ ಯುವಕರು ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಭಾರತದ ವೀರ ಯೋಧರು ದಾಳಿ ಮಾಡಿ ಮುಗಿಸಿದ್ದರು. ಪ್ರಧಾನ ಮಂತ್ರಿ ಯೋಧರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ನನಗೂ ರಕ್ತ ಕುದಿಯುತ್ತಿದೆ. ರಕ್ತ ಕುದಿಯೋದು ಆರಬೇಕು ಅಂದ್ರೆ ಸಂಪೂರ್ಣ ಕಾಶ್ಮೀರ ನಮ್ಮದಾಗಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Mr. Asif Ghafoor, ನಮ್ಮ ಯೋಧರು ಬಾಲಕೋಟ್ಗೆ ಕಬಾಬ್ ತಿನ್ನಕ್ಕೆ ಬಂದಿದ್ದಲ್ಲ!
ಅಗಲಿದ ಯೋಧ ಗುರು ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇದನ್ನು ಮೋದಿಯವರು ಮುಂದುವರಿಸಿ ಉಗ್ರಗಾಮಿಗಳ ಬೇರು ಸಹಿತ ಕಿತ್ತುಹಾಕಬೇಕು. ಪಾಕಿಸ್ತಾನದಲ್ಲಿರುವ ಭಾರತೀಯ ಬಂಧುಗಳು ಸಿವಿಲ್ ವಾರ್ ಮಾಡಬೇಕು. ಚೈನಾದವರ ಬಗ್ಗೆ ಮಾತನಾಡಿದ್ರೆ ಸುಟ್ಟುಹಾಕ್ತಾರೆ ಅದೇ ತರ ಹುರಿಹತ್ ನಲ್ಲಿ ಇರುವವರನ್ನು ಸುತ್ತಾಕಿ ಸುಟ್ಟಾಕಬೇಕು ಎಂದು ಹೇಳಿಕೆ ನೀಡಿದ್ದಾರೆ.
All Is Well ಎಂದಿದ್ದ ಪಾಕ್ ಆರ್ಮಿ: ಸಾಲಾ ಕಣ್ತೆರೆದು ಮಲಗಿತ್ತು ಎಂದ ಪಾಕಿ ಸಿಟಿಜನ್ಸ್!
ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಕಾಲ ಬಿಟ್ಟರೆ ಬಾಕಿ ಸಂದರ್ಭದಲ್ಲಿ ನಮಗೆ ಸೋಲೆ ಆಗುತ್ತಿತ್ತು. ಈಗ ಅದೆಲ್ಲವನ್ನು ಮೀರಿ ದೇಶ ಮುಂದೆ ನಡೆಯಬೇಕು ಎಂದು ಹೇಳಿದ್ದಾರೆ.