Asianet Suvarna News Asianet Suvarna News

ಆಧಾರ್ ಕಾರ್ಡ್'ನಿಂದ ಕೋಟ್ಯಧಿಪತಿಯಾದ ಭಿಕ್ಷುಕ..!

ರಾಯ್ ಬರೇಲಿಯಲ್ಲಿ ಆಧಾರ್‌ನಿಂದಾಗಿ ಭಿಕ್ಷುಕನೋರ್ವ ಕೋಟಿಪತಿ ಎಂಬ ಕುತೂಹಲದ ವಿಚಾರ ತಿಳಿದು ಬಂದಿದೆ.

In Uttar Pradesh Rae Bareli Aadhaar card helps identify millionaire Beggar

ರಾಯ್'ಬರೇಲಿ (ಡಿ.22): ಆಧಾರ್‌ನಿಂದಾಗಿ ಭಿಕ್ಷುಕ ಕೋಟಿಪತಿ ಎಂಬ ಕುತೂಹಲದ ವಿಚಾರ ತಿಳಿದು ಬಂದಿದೆ. ಡಿ.13ರಂದು ರಾಯ್ ಬರೇಲಿಯಲ್ಲಿ ಸ್ವಾಮಿ ಭಾಸ್ಕರ್ ಎಂಬುವರು, ಭಿಕ್ಷುಕ ರೀತಿಯಲ್ಲಿರುವ ವೃದ್ಧನನ್ನು ಕಂಡರು.

ಆ ವೃದ್ಧನಿಗೆ ಆಹಾರ ನೀಡಿ ಕಟ್ಟಿಂಗ್ ಮತ್ತು ಶೇವ್ ಮಾಡಿಸಿದರು. ಬಳಿಕ ವೃದ್ಧ ಸ್ನಾನಕ್ಕೆಂದು ಹೋಗಿದ್ದರು. ಈ ವೇಳೆ ಸಿಕ್ಕ ಆಧಾರ್‌ನಿಂದ ವೃದ್ಧ ತಮಿಳುನಾಡಿನ ಮುತ್ತಯ್ಯ ಎಂಬುವರಾಗಿದ್ದು, ಬ್ಯಾಂಕ್ ಖಾತೆಯಲ್ಲಿ 1.62 ಕೋಟಿ ರು. ಇದ್ದದ್ದು ಪತ್ತೆಯಾಗಿದೆ. ವೃದ್ಧನನ್ನು ವಿಮಾನದ ಮೂಲಕ ತಮಿಳುನಾಡಿಗೆ ಕಳುಹಿಸಿಕೊಡಲಾಗಿದೆ!

Follow Us:
Download App:
  • android
  • ios