ಆಧಾರ್ ಕಾರ್ಡ್'ನಿಂದ ಕೋಟ್ಯಧಿಪತಿಯಾದ ಭಿಕ್ಷುಕ..!
ರಾಯ್ ಬರೇಲಿಯಲ್ಲಿ ಆಧಾರ್ನಿಂದಾಗಿ ಭಿಕ್ಷುಕನೋರ್ವ ಕೋಟಿಪತಿ ಎಂಬ ಕುತೂಹಲದ ವಿಚಾರ ತಿಳಿದು ಬಂದಿದೆ.
ರಾಯ್'ಬರೇಲಿ (ಡಿ.22): ಆಧಾರ್ನಿಂದಾಗಿ ಭಿಕ್ಷುಕ ಕೋಟಿಪತಿ ಎಂಬ ಕುತೂಹಲದ ವಿಚಾರ ತಿಳಿದು ಬಂದಿದೆ. ಡಿ.13ರಂದು ರಾಯ್ ಬರೇಲಿಯಲ್ಲಿ ಸ್ವಾಮಿ ಭಾಸ್ಕರ್ ಎಂಬುವರು, ಭಿಕ್ಷುಕ ರೀತಿಯಲ್ಲಿರುವ ವೃದ್ಧನನ್ನು ಕಂಡರು.
ಆ ವೃದ್ಧನಿಗೆ ಆಹಾರ ನೀಡಿ ಕಟ್ಟಿಂಗ್ ಮತ್ತು ಶೇವ್ ಮಾಡಿಸಿದರು. ಬಳಿಕ ವೃದ್ಧ ಸ್ನಾನಕ್ಕೆಂದು ಹೋಗಿದ್ದರು. ಈ ವೇಳೆ ಸಿಕ್ಕ ಆಧಾರ್ನಿಂದ ವೃದ್ಧ ತಮಿಳುನಾಡಿನ ಮುತ್ತಯ್ಯ ಎಂಬುವರಾಗಿದ್ದು, ಬ್ಯಾಂಕ್ ಖಾತೆಯಲ್ಲಿ 1.62 ಕೋಟಿ ರು. ಇದ್ದದ್ದು ಪತ್ತೆಯಾಗಿದೆ. ವೃದ್ಧನನ್ನು ವಿಮಾನದ ಮೂಲಕ ತಮಿಳುನಾಡಿಗೆ ಕಳುಹಿಸಿಕೊಡಲಾಗಿದೆ!