Asianet Suvarna News Asianet Suvarna News

ಉತ್ತರ ಪ್ರದೇಶದಲ್ಲಿ ಕೇಸರಿ ಬಣ್ಣದ ಅಂಬೇಡ್ಕರ್ ಪ್ರತಿಮೆ ಅನಾವರಣ ಆರೋಪ

ಅಂಬೇಡ್ಕರ್ ಹೆಸರಿನ ಜತೆ ‘ರಾಮ್‌ಜೀ’ ಸೇರಿಸುವಂತೆ ಉತ್ತರಪ್ರದೇಶ ಸರ್ಕಾರ ಸುತ್ತೋಲೆ ಹೊರಡಿಸಿದ ಬೆನ್ನಲ್ಲೇ, ಬದೌನ್‌ನಲ್ಲಿ ಭಾನುವಾರ ಅನಾವರಣಗೊಳಿಸಿರುವ ಅಂಬೇಡ್ಕರ್ ಪ್ರತಿಮೆ ವಿವಾದಕ್ಕೆ ಕಾರಣವಾಗಿದೆ.

In UP Vandalised Statue of Ambedkar Replaced With a Saffron One

ಲಖನೌ: ಅಂಬೇಡ್ಕರ್ ಹೆಸರಿನ ಜತೆ ‘ರಾಮ್‌ಜೀ’ ಸೇರಿಸುವಂತೆ ಉತ್ತರಪ್ರದೇಶ ಸರ್ಕಾರ ಸುತ್ತೋಲೆ ಹೊರಡಿಸಿದ ಬೆನ್ನಲ್ಲೇ, ಬದೌನ್‌ನಲ್ಲಿ ಭಾನುವಾರ ಅನಾವರಣಗೊಳಿಸಿರುವ ಅಂಬೇಡ್ಕರ್ ಪ್ರತಿಮೆ ವಿವಾದಕ್ಕೆ ಕಾರಣವಾಗಿದೆ.

ಇತ್ತೀಚೆಗೆ ದುಗ್ರೈಯ್ಯ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೂತನ ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣ ಗೊಳಿಸಿತ್ತು.

ಸಾಮಾನ್ಯವಾಗಿ ಅಂಬೇಡ್ಕರ್ ಪ್ರತಿಮೆಗೆ ಹಾಕಿದ ಬಟ್ಟೆ ನೀಲಿ ಬಣ್ಣದಿಂದ ಕೂಡಿರುತ್ತದೆ. ಆದರೆ ಈ ಪ್ರತಿಮೆ ಕೇಸರಿ ಬಣ್ಣದಲ್ಲಿದೆ. ಅದು ಇದೀಗ ವಿವಾದಕ್ಕೆ ಕಾರಣವಾಗಿದೆ.

Follow Us:
Download App:
  • android
  • ios