ತವೀ ನದಿಯಲ್ಲಿ ಹೆಚ್ಚಾದ ನೀರಿನ ಪ್ರಮಾಣ| ಪ್ರವಾಹಕ್ಕೆ ಸಿಲುಕಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಏರಿ ಕುಳಿತ ಮೀನುಗಾರರು| ಭಯಬೇಡ, ನಾವಿದ್ದೇವೆ... ಧುಮ್ಮಿಕ್ಕಿ ಹರಿಯುತ್ತಿದ್ದ ನದಿ ಮಧ್ಯೆಯೂ ಮೀನುಗಾರರ ರಕ್ಷಣೆಗೆ ಇಳಿದೇ ಬಿಡ್ತು ನಮ್ಮ ಹೆಮ್ಮೆಯ ಸೇನೆ| 

ಶ್ರೀನಗರ[ಆ.19]: ಜಮ್ಮು ಕಾಶ್ಮೀರದ ತವೀ ನದಿಯಲ್ಲಿ ಅಚಾನಕ್ಕಾಗಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿಗೆ ಅಡ್ಡಲಾಗಿ ಕಟ್ಟಿದ್ದ ಇಬ್ಬರು ಬೆಸ್ತರು ಪ್ರವಾಹದಲ್ಲಿ ಸಿಲುಕಿದ್ದಾರೆ. ಹೀಗೆ ಅಪಾಯದಲ್ಲಿ ಸಿಲುಕಿದ್ದ ಈ ಇಬ್ಬರು ಮೀನುಗಾರರನ್ನು ಸತತ 30 ನಿಮಿಷಗಳ ಕಾರ್ಯಾಚರಣೆ ನಡೆಸಿ ಭಾರತೀಯ ವಾಯುಸೇನೆ ರಕ್ಷಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಇಬ್ಬರು ಮೀನುಗಾರರು ನಿರ್ಮಾಣ ಹಂತದಲ್ಲಿದ್ದ ಸೇತುವೆ ಮೇಲೆ ಹತ್ತಿ ಕುಳಿತಿದ್ದಾರೆ. ಈ ವೇಳೆ ವಾಯುಪಡೆ ಇವರ ರಕ್ಷಣೆಗೆ ಮುಂದಾಗಿದೆ. ಹೆಲಿಕಾಪ್ಟರ್ ಮೂಲಕ ಓರ್ವ ಯೋಧ ಸೇತುವೆ ಮೇಲಿಳಿದು ಇಬ್ಬರಿಗೂ ಜೀವ ರಕ್ಷಕ ಜಾಕೆಟ್ ತೊಡಿಸಿ ಮೇಲಕ್ಕೆತ್ತಿದ್ದಾರೆ. 

Scroll to load tweet…
Scroll to load tweet…

"

ಇಬ್ಬರನ್ನೂ ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಬಳಿಕ ಮತ್ತೆ ಮರಳಿದ ವಾಯುಸೇನಾ ಹೆಲಿಕಾಪ್ಟರ್ ಸೇತುವೆ ಮೇಲಿದ್ದ ಯೋಧನನ್ನು ಕರೆದೊಯ್ದಿದೆ. ಜೀವ ಪಣಕ್ಕಿಟ್ಟು ದೇಶದ, ಇಲ್ಲಿನ ನಾಗರಿಕರ ಸೇವೆಗೆ, ರಕ್ಷಣೆಗೆ ಮುಂದಾಗುವ ನಮ್ಮ ಯೋಧರಿಗೆ ಬಿಗ್ ಸೆಲ್ಯೂಟ್.<br/>