‘ಅಧಿಕಾರಕ್ಕೆ ಬಂದರೆ ಇಮಾಮರಿಗೆ ₹10 ಸಾವಿರ ವೇತನ’
ಆಂಧ್ರದಲ್ಲಿ ಓಲೈಕೆ ರಾಜಕೀಯ ಮುಂದುವರೆದಿದ್ದು, 2019ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಇಮಾಮರಿಗೆ 10000 ರು. ಮತ್ತು ಮೌಸಿಗಳಿಗೆ 5000 ರು. ವೇತನ ನೀಡುವುದಾಗಿ ವೈಎಸ್’ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್. ಜಗನ್ಮೋಹನ್ ರೆಡ್ಡಿ ಭರವಸೆ ನೀಡಿದ್ದಾರೆ.
ಅನಂತಪುರ: ಆಂಧ್ರದಲ್ಲಿ ಓಲೈಕೆ ರಾಜಕೀಯ ಮುಂದುವರೆದಿದ್ದು, 2019ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಇಮಾಮರಿಗೆ 10000 ರು. ಮತ್ತು ಮೌಸಿಗಳಿಗೆ 5000 ರು. ವೇತನ ನೀಡುವುದಾಗಿ ವೈಎಸ್’ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್. ಜಗನ್ಮೋಹನ್ ರೆಡ್ಡಿ ಭರವಸೆ ನೀಡಿದ್ದಾರೆ.
ರಪ್ಟಾಡು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮುಸ್ಲಿಂ ಸಮುದಾಯದ ಸಮಾವೇಶದಲ್ಲಿ ಅವರು ಈ ಭರವಸೆ ನೀಡಿದರು.
ಸಿಎಂ ಚಂದ್ರಬಾಬು ನಾಯ್ಡು ಕೇವಲ ಪೊಳ್ಳು ಭರವಸೆ ನೀಡುತ್ತಿದ್ದಾರೆ, ಆದರೆ ತಾವು ಅಧಿಕಾರಕ್ಕೆ ಬಂದಲ್ಲಿ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ತಿಳಿಸಿದರು.