ಕಾನೂನು ಕೈಗೆತ್ತಿಕೊಂಡರೆ ಉಪವಾಸ ಕೂರುತ್ತೇನೆ: ಪೇಜಾವರರು
ಉಡುಪಿಯಲ್ಲಿ ಕನಕನಡೆ ಆಯೋಜನೆಗೆ ಜಿಲ್ಲಾಡಳಿತ ತಡೆ ನೀಡಿದ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಪೇಜಾವರ ಶ್ರೀಗಳನ್ನು ಭೇಟಿಯಾದರು.
ಉಡುಪಿ (ಅ.22): ಉಡುಪಿಯಲ್ಲಿ ಕನಕನಡೆ ಆಯೋಜನೆಗೆ ಜಿಲ್ಲಾಡಳಿತ ತಡೆ ನೀಡಿದ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಪೇಜಾವರ ಶ್ರೀಗಳನ್ನು ಭೇಟಿಯಾದರು.
ಪೇಜಾವರ ಶ್ರೀಗಳ ಜೊತೆ ಮಾತುಕತೆ ನಡೆಸಿ ಸ್ವಚ್ಛತಾ ಕಾರ್ಯವನ್ನು ಮಠದೊಳಗೆ ಸೀಮಿತಗೊಳಿಸಲು ಒಪ್ಪಿಕೊಂಡಿದ್ದಾರೆ.
ಸರ್ಕಾರದ ನಿರ್ಧಾರದಿಂದ ಮನಸ್ಸಿಗೆ ನೋವಾಗಿದೆ. ಸಂಘರ್ಷ ಬೇಡ, ಕಾನೂನು ಕೈಗೆತ್ತಿಕೊಂಡರೆ ಉಪವಾಸ ಕೂರುತ್ತೇನೆ. ಜಿಲ್ಲಾಡಳಿತದ ಆದೇಶವನ್ನು ಪಾಲಿಸಲಾಗುವುದು ಎಂದು ಪೇಜಾವರರು ತಿಳಿಸಿದ್ದಾರೆ.