Asianet Suvarna News Asianet Suvarna News

ರಮೇಶ ರಾಜೀನಾಮೆಯಿಂದ ಸರಕಾರಕ್ಕೆ ನಷ್ಟವಿಲ್ಲ: ಸಚಿವ

ಅತೃಪ್ತ ಮುಖಂಡ  ರಮೇಶ್ ಜಾರಕಿಹೊಳಿ ಒಂದು ವೇಳೆ ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದು ಎಂದು ಸಚಿವರು ಹೇಳಿದ್ದಾರೆ. 

If Ramesh Jarkiholi Quit Congress No Problem For Government Says Minister PuttarangaShetty
Author
Bengaluru, First Published Apr 26, 2019, 12:13 PM IST

ಬೆಳಗಾವಿ :  ನಾನು ಕಾಂಗ್ರೆಸ್ ಕಟ್ಟಾಳು ನಾನು ಬೆಳಗಾವಿಗೆ ಬಂದಿದ್ದು ಮಾಜಿ ಸಚಿವ ರಮೇಶ ಜಾರಕಿಹೊಳಿ ಸಂಧಾನಕ್ಕಲ್ಲ ಎಂದು ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದ್ದಾರೆ. 

ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು ಮಾಜಿ ಸಚಿವ ರಮೇಶ ಜಾರಕಿಹೊಳಿ ಕಾಂಗ್ರೆಸ್‍ನ ನಿಷ್ಠಾವಂತ ಶಾಸಕ ಅವರು ರಾಜೀನಾಮೆ ನೀಡುವುದಿಲ್ಲ. ನಾನು ಬೆಳಗಾವಿಗೆ ಬಂದಿದ್ದು ಸಂಬಂಧಿಕರ ಮದುವೆಗೆ ಈಗಾಗಲೇ ರಮೇಶ ಅವರನ್ನು ಮನವೊಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನಡೆಸಲಿದ್ದಾರೆ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು. 

ಇನ್ನು ಸದ್ಯ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಒಂದು ವೇಳೆ ರಾಜೀನಾಮೆ ನೀಡಿದರೆ ಯಾವುದೇ ನಷ್ಟವಾಗುವುದಿಲ್ಲ. ನಾನು ಬಂದಿದ್ದು, ರಮೇಶ್ ಜೊತೆಗೆ ಸಂಧಾನಕ್ಕಲ್ಲ. ನಾನು ಯಾರ ಬಣದಲ್ಲಿಯೂ ಇಲ್ಲ. ಪಕ್ಷ ವಿರೋಧಿ ಚಟುವಟಿಕೆ ನಾನು ಎಂದೂ ಮಾಡಿಲ್ಲ ಎಂದು ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟಪಡಿಸಿದರು.

Follow Us:
Download App:
  • android
  • ios