ಸೂಪರ್‌ಸ್ಟಾರ್ ರಜನಿಕಾಂತ್ ನಿರ್ವಾಹಕರಾಗಿದ್ದಾಗ ಪ್ರಯಾಣಿಕರ ಜತೆ ಸ್ನೇಹ ಹಾಗೂ ಸೌಜನ್ಯದಿಂದ ವರ್ತಿಸುತ್ತಿದ್ದರು. ಇದನ್ನು ನಾನೇ ನೋಡಿದ್ದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಬಣ್ಣಿಸಿದ್ದಾರೆ.

ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ ನಿರ್ವಾಹಕರಾಗಿದ್ದಾಗ ಪ್ರಯಾಣಿಕರ ಜತೆ ಸ್ನೇಹ ಹಾಗೂ ಸೌಜನ್ಯದಿಂದ ವರ್ತಿಸುತ್ತಿದ್ದರು. ಇದನ್ನು ನಾನೇ ನೋಡಿದ್ದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಬಣ್ಣಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸಚಿವರು, ನಾನು ಕೂಡ ವಿದ್ಯಾರ್ಥಿ ಜೀವನದಲ್ಲಿ ಬಸ್ ಪ್ರಯಾಣ ಮಾಡಿದ್ದೇನೆ. ಉತ್ತಮ ನಿರ್ವಾಹಕರನ್ನು ನೋಡಿದ್ದೇನೆ. ಇಂದಿನ ಖ್ಯಾತ ಚಿತ್ರನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ‘10ಎ’ ಬಸ್‌ನಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇದೇ ಬಸ್‌ನಲ್ಲಿ ನಾನು ಹನುಮಂತನಗರಕ್ಕೆ ಪ್ರಯಾಣಿಸಿದ್ದ ನೆನಪು ಮರೆಯುವಂತಿಲ್ಲ. ಅವರು ಎಲ್ಲಾ ಪ್ರಯಾಣಿಕರೊಂದಿಗೆ ಸ್ನೇಹಪರತೆ ಹಾಗೂ ಸೌಜನ್ಯದಿಂದ ವರ್ತಿಸುತ್ತಿದ್ದರು. ಅವರು ಇದ್ದ ಬಸ್ ಹತ್ತುವುದೆಂದರೆ ಪ್ರಯಾಣಿಕರಿಗೆ ಮಹದಾನಂದವಾಗಿರುತ್ತಿತ್ತು. ಇಂತವರ ಕರ್ತವ್ಯ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿಕೊಂಡಿದ್ದಾರೆ.