ಮಂತ್ರಿ ಇದ್ದರಷ್ಟೇ ಕೆಲಸ ಮಾಡುವುದೆಂದಲ್ಲ. ಮಂತ್ರಿ ಆಗದಿದ್ದರೂ ಜನರ ಸೇವೆ ಮಾಡಲು ಬೇಕಾದಷ್ಟು ದಾರಿ ಇದ್ದು, ಸಚಿವ ಸ್ಥಾನ ಸಿಗಲಿಲ್ಲವೆಂದು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಇಲ್ಲಿನ ದಕ್ಷಿಣ ಶಾಸಕ ಡಾ. ಶಾಮನೂರು ಶಿವ ಶಂಕರಪ್ಪ ಸ್ಪಷ್ಟಪಡಿಸಿದ್ದಾರೆ. 

ದಾವಣಗೆರೆ: ಮಂತ್ರಿ ಇದ್ದರಷ್ಟೇ ಕೆಲಸ ಮಾಡುವುದೆಂದಲ್ಲ. ಮಂತ್ರಿ ಆಗದಿದ್ದರೂ ಜನರ ಸೇವೆ ಮಾಡಲು ಬೇಕಾದಷ್ಟು ದಾರಿ ಇದ್ದು, ಸಚಿವ ಸ್ಥಾನ ಸಿಗಲಿಲ್ಲವೆಂದು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಇಲ್ಲಿನ ದಕ್ಷಿಣ ಶಾಸಕ ಡಾ. ಶಾಮನೂರು ಶಿವ ಶಂಕರಪ್ಪ ಸ್ಪಷ್ಟಪಡಿಸಿದ್ದಾರೆ. 

Add Asianetnews Kannada as a Preferred SourcegooglePreferred

ಶುಕ್ರವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಪ್ರಭಾವಿ ಅಂತ ನಮ್ಮನ್ನು ಯಾರು ಹೇಳುತ್ತಾರೆ? ನಾವೇ ಹೇಳಿ ಕೊಳ್ಳಬೇಕಷ್ಟೇ. ಮಂತ್ರಿ ಮಾಡಿ ಅಂತ ಕೇಳೋಕೆ ಯಾರ ಬಳಿಯೂ ಹೋಗಿಲ್ಲ. ಯಾರೂ ನನ್ನನ್ನು ಸಂಪರ್ಕಿಸಿಯೂ ಇಲ್ಲ. ಮಂತ್ರಿಗಿರಿ ಅದಾ ಗಿಯೇ ಬಂದಿದ್ದರೆ ನಿರ್ವಹಿಸುತ್ತಿದ್ದೆ ಎಂದು ತಿಳಿಸಿದರು.