Asianet Suvarna News Asianet Suvarna News

ಆಪರೇಶನ್ ವಿಫಲವಾಗಿದ್ದಕ್ಕೆ BSYರಿಂದ ಬರ ಅಧ್ಯಯನ: ಎಂಬಿಪಿ ಲೇವಡಿ

ಒಂದು ಕಡೆ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಮುಂದಡಿ ಇಟ್ಟಿದ್ದರೆ ಇನ್ನೊಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಹ ಬರ ಅಧ್ಯಯನ ಪ್ರವಾಸ ಆರಂಭಿಸಿದ್ದಾರೆ. ಆದರೆ ಬಿಎಸ್ ವೈ ಪ್ರವಾಸವನ್ನು ಗೃಹ ಸಚಿವ ಎಂಬಿ ಪಾಟೀಲ್ ಟೀಕಿಸಿದ್ದಾರೆ.

Home minister MB Patil Slams Karnataka BJP President BS Yeddyurappa
Author
Bengaluru, First Published Jun 9, 2019, 8:35 PM IST

ವಿಜಯಪುರ[ಜೂ. 09]  ಬಿಜೆಪಿ ಬರ ಅಧ್ಯಯನ ಕೇವಲ ನಾಟಕ. ಆಪರೇಷನ್ ಕಮಲ ವಿಫಲವಾಗಿದ್ದಕ್ಕೆ ಬಿಜೆಪಿ ಬರ ಪ್ರವಾಸ ಆರಂಭಿಸಿದೆ ಎಂದು ಗೃಹ ಸಚಿವ ಎಂಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಮುಂಗಾರು ಆರಂಭದಲ್ಲಿ ಬರ ಪ್ರವಾಸದ ನಾಟಕವಾಡ್ತಿದ್ದಾರೆ . ನಾಳೆ ಅಥವಾ ನಾಡಿದ್ದು ಮುಂಗಾರು ರಾಜ್ಯಕ್ಕೆ ಪ್ರವೇಶಿಸಲಿದೆ  ಇಂಥ ಸಮಯದಲ್ಲಿ ಬಿಜೆಪಿಯಿಂದ ಬರ ಅಧ್ಯಯನ ನಾಟಕ ನಡೆಯುತ್ತಿದೆ ಎಂದಿದ್ದಾರೆ.

ರಾಜೀವ್‌ ಗಾಂಧಿ, ದೇವೇಗೌಡರ ನಿರ್ಧಾರಗಳು ಕಾಂಗ್ರೆಸ್ ಸೋಲಿಗೆ ಕಾರಣವಾಯ್ತಾ?

ರಾಜ್ಯದ 160ಕ್ಕೂ ಅಧಿಕ ತಾಲೂಕುಗಳು ಬರ ಪರಿಸ್ಥಿತಿ ಎದುರಿಸುತ್ತಿವೆ. ಬರ ಅಧ್ಯಯನ ವಿಚಾರ ರಾಜಕಾರಣಕ್ಕೆ ಬಳಕೆಯಾಗುತ್ತಿರುವುದು ಮಾತ್ರ ರಾಜ್ಯದ ಜನರ ದುರ್ದೈವ ಅಲ್ಲದೇ ಮತ್ತಿನ್ನೇನು?

Follow Us:
Download App:
  • android
  • ios