Asianet Suvarna News Asianet Suvarna News

ಯುವ ಪತ್ರಕರ್ತೆಯರಿಗಿಲ್ಲ ಶಬರಿಮಲೆಗೆ ತೆರಳಲು ಅವಕಾಶವಿಲ್ಲ

  ಶಬರಿಮಲೆ ಅಯ್ಯಪ್ಪ ದೇವಾಲಯ ಸೋಮವಾರ ಮತ್ತು ಮಂಗಳವಾರ ತೆರೆದಿರುವ ಹಿನ್ನೆಲೆಯಲ್ಲಿ, ಆ ವೇಳೆ ವರದಿಗಾರಿಕೆಗೆ 10ರಿಂದ 50 ವರ್ಷ ವಯಸ್ಸಿನ ಮಹಿಳಾ ಪತ್ರಕರ್ತರನ್ನು ವರದಿಗಾರಿಕೆಗೆ ಕಳಿಸಬೇಡಿ ಎಂದು ಶಬರಿಮಲೆ ಕರ್ಮ ಸಮಿತಿ ಎಂಬ ಅನೇಕ ಹಿಂದೂ ಸಂಘಟನೆಗಳ ಸಮೂಹವೊಂದು ಎಚ್ಚರಿಕೆ ನೀಡಿದೆ.

Hindu outfits warn media houses to not send women journalist to cover
Author
Bengaluru, First Published Nov 5, 2018, 12:12 PM IST

ಕೊಟ್ಟಾಯಂ :  ಶಬರಿಮಲೆ ಅಯ್ಯಪ್ಪ ದೇವಾಲಯ ಸೋಮವಾರ ಮತ್ತು ಮಂಗಳವಾರ ತೆರೆದಿರುವ ಹಿನ್ನೆಲೆಯಲ್ಲಿ, ಆ ವೇಳೆ ವರದಿಗಾರಿಕೆಗೆ 10ರಿಂದ 50 ವರ್ಷ ವಯಸ್ಸಿನ ಮಹಿಳಾ ಪತ್ರಕರ್ತರನ್ನು ವರದಿಗಾರಿಕೆಗೆ ಕಳಿಸಬೇಡಿ ಎಂದು ಶಬರಿಮಲೆ ಕರ್ಮ ಸಮಿತಿ ಎಂಬ ಅನೇಕ ಹಿಂದೂ ಸಂಘಟನೆಗಳ ಸಮೂಹವೊಂದು ಎಚ್ಚರಿಕೆ ನೀಡಿದೆ.

ಈ ಸಂಬಂಧ ಆಯಾ ಮಾಧ್ಯಮಗಳ ಸಂಪಾದಕರಿಗೆ ಅದು ಪತ್ರ ಬರೆದಿದೆ. ‘ಪರಿಸ್ಥಿತಿ ಉದ್ವಿಗ್ನಗೊಳ್ಳುವ ಕ್ರಮವನ್ನು ನೀವು ಕೈಗೊಳ್ಳುವುದಿಲ್ಲ ಎಂದು ನಂಬಿದ್ದೇವೆ’ ಎಂದು ಅದು ಪತ್ರದಲ್ಲಿ ತಿಳಿಸಿದೆ.

ಕಳೆದ ಸಲ ಮಾಸಿಕ ಪೂಜೆಯ ವೇಳೆ ದೇಗುಲ ತೆರೆದ ಸಂದರ್ಭದಲ್ಲಿ ಈ ವಯೋಮಾನದ ಮಹಿಳಾ ಪತ್ರಕರ್ತರು ವರದಿಗಾರಿಕೆಗೆ ಬಂದಾಗ ಕೆಲವು ಕಿಡಿಗೇಡಿಗಳು ದಾಳಿ ನಡೆಸಿದ್ದರು. ಈ ವೇಳೆ ಬೆಂಗಳೂರಿನ ಪತ್ರಕರ್ತೆ ಪೂಜಾ ಪ್ರಸನ್ನ ಸೇರಿದಂತೆ ಹಲವರು ದಾಳಿಗೆ ತುತ್ತಾಗಿದ್ದರು. ಅವರ ಕಾರುಗಳನ್ನು ಜಖಂಗೊಳಿಸಲಾಗಿತ್ತು.

ಭದ್ರತೆಗೆ 50ಕ್ಕಿಂತ ಹೆಚ್ಚು ವಯಸ್ಸಿನ ಮಹಿಳಾ ಪೊಲೀಸರು 

ಶಬರಿಮಲೆ: ಅನಗತ್ಯ ಗೊಂದಲ ತಪ್ಪಿಸುವ ಉದ್ದೇಶದಿಂದ ಶಬರಿಮಲೆಯಲ್ಲಿ 50 ವರ್ಷ ವಯಸ್ಸಿಗಿಂತ ಹೆಚ್ಚು ವಯಸ್ಸಿನ ಮಹಿಳಾ ಪೊಲೀಸರನ್ನೇ ನಿಯೋಜಿಸಲು ಕೇರಳ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

Follow Us:
Download App:
  • android
  • ios