ಜೀರೋ ಟ್ರಾಫಿಕ್ ಬಳಸದೇ ಸಾಮಾನ್ಯರಂತೆ ಮಗನ ಸಿನಿಮಾ ಸೆಟ್’ಗೆ ಹೋದ ಎಚ್’ಡಿಕೆ
ನಿಖಿಲ್ ಕುಮಾರಸ್ವಾಮಿ ಜಾಗ್ವಾರ್ ಚಿತ್ರದ ಮೂಲಕ ಸ್ಯಾಂಡಲ್’ವುಡ್’ಗೆ ಕಾಲಿಟ್ಟರು. ಚೊಚ್ಚಲ ಸಿನಿಮವೇ ಭಾರೀ ಸದ್ದು ಮಾಡಿತ್ತು. ತಂದೆಯ ಜೊತೆ ರಾಜಕೀಯ ಚಟುವಟಿಕೆಗಳಲ್ಲೂ ಬಾಗಿಯಾಗುತ್ತಾ, ಸಿನಿಮಾದಲ್ಲೂ ಸಕ್ರಿಯರಾಗಿದ್ದಾರೆ.
ಬೆಂಗಳೂರು (ಜು. 04): ಅಧಿವೇಶನಕ್ಕೆ ತೆರಳುವ ಮುನ್ನ ಸಿಎಂ ಕುಮಾರಸ್ವಾಮಿ ಮಗನ ಸಿನಿಮಾದ ಶೂಟಿಂಗ್ ಸೆಟ್ ಗೆ ತೆರಳಿದ್ದಾರೆ. ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಸೀತಾರಾಮ ಕಲ್ಯಾಣ ಸಿನಿಮಾ ಶೂಟಿಂಗ್ ಸೆಟ್’ಗೆ ಎಚ್’ಡಿಕೆ ಹೋಗಿದ್ದಾರೆ.
ಮುಖ್ಯಮಂತ್ರಿ ಎಂದು ಜೀರೋ ಸಿಗ್ನಲ್ ಬಳಸದೆ ಸಾಮಾನ್ಯರಂತೆ ಪ್ಯಾಲೇಸ್ ಗ್ರೌಂಡ್ ಗೆ ತೆರಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸೀತಾ ರಾಮ ಕಲ್ಯಾಣ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಜಾಗ್ವಾರ್ ಚಿತ್ರದ ಮೂಲಕ ಸ್ಯಾಂಡಲ್’ವುಡ್’ಗೆ ಕಾಲಿಟ್ಟರು. ಚೊಚ್ಚಲ ಸಿನಿಮವೇ ಭಾರೀ ಸದ್ದು ಮಾಡಿತ್ತು. ತಂದೆಯ ಜೊತೆ ರಾಜಕೀಯ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಾ, ಸಿನಿಮಾದಲ್ಲೂ ಸಕ್ರಿಯರಾಗಿದ್ದಾರೆ.