ಸದ್ಯ ಈ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿರುವ ಹೆಚ್ ಡಿ ಕುಮಾರಸ್ವಾಮಿ ಮೇಟಿಯ ರಾಸಲೀಲೆ ಸಿಡಿ ಮುಚ್ಚಿಡಲು ಸಿಎಂ ಸಿದ್ಧರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಇಂಥಹ ಪ್ರಕರಣಗಳನ್ನು ಮುಚ್ಚಿಡಲು ಸಿಎಂ ಬಳಿ ಒಂದು ತಂಡವೇ ಇದೆ. ಇವರು ಸಿಡಿ ಬಿಡುಗಡೆ ಮಾಡದಂತೆ ರಾಜಶೇಖರ್ಗೆ ಹಣದ ಆಮಿಷವೊಡ್ಡಿದ್ದರು ಹಾಗೂ ಮೇಟಿಯನ್ನು ರಕ್ಷಿಸಲು ಸಿಎಂ ಸಿದ್ದರಾಮಯ್ಯ ಕಸರತ್ತು ನಡೆಸಿದ್ದರು. ಸಿಡಿ ಬಹಿರಂಗಕ್ಕೂ ಮೊದಲೇ ಮೇಟಿ ರಾಜೀನಾಮೆ ಪಡೆಯಬೇಕಿತ್ತು. ಎಂದು ಹೇಳಿದ್ದಾರೆ.
ಬೆಂಗಳೂರು(ಡಿ.14): ಮೇಟಿ ರಾಸಲೀಲೆ ಸಿಡಿಯನ್ನು ಮೊದಲೇ ಸಿಎಂ ಸಿದ್ದರಾಮಯ್ಯ ನೋಡಿದ್ರಾ? ರಾಸಲೀಲೆ ಸಿಡಿ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಗೊತ್ತಿತ್ತಾ? ಇಂತಹುದೊಂದು ಅನುಮಾನ ಬರಲು ಕಾರಣವಾಗಿದ್ದು ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ ಹೇಳಿಕೆ
ರಾಜ್ಯಾದ್ಯಂತ ಭಾರೀ ಚರ್ಚೆಗೀಡಾಗಿದ್ದ ಎಚ್. ವೈ ಮೇಟಿ ಪ್ರಕರಣ ಇಂದು ಬಹುದೊಡ್ಡ ಬೆಳವಣಿಗೆ ಕಂಡಿದೆ. RTI ಕಾರ್ಯಕರ್ತ ರಾಜಶೇಖರ್ ಮದೆಹಲಿಗೆ ತೆರಳಿ ಮೇಟಿಯ ರಾಸಲೀಲೆ ಸಿಡಿಯನ್ನು ಬಿಡುಗಡೆ ಮಾಡಿದ್ದು, ಇದರ ಬೆನ್ನಲ್ಲೇ ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದನ್ನು ನೋಡಿದ ಮರುಕ್ಷಣವೇ ಮೇಟಿ ತಮ್ಮ ಹುದ್ದೆಗೆ ರಾಜಿನಾಮೆಯನ್ನೂ ನೋಡಿದ್ದಾರೆ.
ಸದ್ಯ ಈ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿರುವ ಹೆಚ್ ಡಿ ಕುಮಾರಸ್ವಾಮಿ ಮೇಟಿಯ ರಾಸಲೀಲೆ ಸಿಡಿ ಮುಚ್ಚಿಡಲು ಸಿಎಂ ಸಿದ್ಧರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಇಂಥಹ ಪ್ರಕರಣಗಳನ್ನು ಮುಚ್ಚಿಡಲು ಸಿಎಂ ಬಳಿ ಒಂದು ತಂಡವೇ ಇದೆ. ಇವರು ಸಿಡಿ ಬಿಡುಗಡೆ ಮಾಡದಂತೆ ರಾಜಶೇಖರ್ಗೆ ಹಣದ ಆಮಿಷವೊಡ್ಡಿದ್ದರು ಹಾಗೂ ಮೇಟಿಯನ್ನು ರಕ್ಷಿಸಲು ಸಿಎಂ ಸಿದ್ದರಾಮಯ್ಯ ಕಸರತ್ತು ನಡೆಸಿದ್ದರು. ಸಿಡಿ ಬಹಿರಂಗಕ್ಕೂ ಮೊದಲೇ ಮೇಟಿ ರಾಜೀನಾಮೆ ಪಡೆಯಬೇಕಿತ್ತು. ಎಂದು ಹೇಳಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿಯ ಈ ಹೇಳಿಕೆಯನ್ನು ನೋಡಿದರೆ ಸಿಎಂಗೆ ಸಿಡಿ ವಿಚಾರ ಮೊದಲೇ ತಿಳಿದಿತ್ತಾ? ಎಂಬ ನುಮಾನ ಹುಟ್ಟಿಕೊಳ್ಳುತ್ತದೆ.
