ಸಿಎಂ ನಂತರ ದೇವೇಗೌಡರ ಸಿನಿಮಾ ವೀಕ್ಷಣೆ : 2 ದಿನದ ನಂತರ ಮತ್ತೊಂದು ನೋಡುತ್ತೇನೆ ಎಂದರು
ಇನ್ನೆರಡು ದಿನಗಳ ನಂತರ ಪುನೀತ್ ಅಭಿನಯದ ರಾಜಕುಮಾರ ಚಿತ್ರವನ್ನು ನೋಡುತ್ತೇನೆ
ಮೈಸೂರು(ಮೇ.22): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರ ಎಲ್ಲ ರಾಜಕೀಯ ನಾಯಕರಿಗೆ ಸಿನಿಮಾ ನೋಡುವ ಪ್ರೀತಿ ಶುರುವಾಗಿದೆ. ಇಂದು ಮಾಜಿ ಪ್ರಧಾನಿ ದೇವೇಗೌಡ ಅವರು ಮೈಸೂರಿನ ಡಿ.ಆರ್.ಸಿ ಚಿತ್ರಮಂದಿರದಲ್ಲಿ ಶಿವರಾಜ್ ಕುಮಾರ್ ಅಭಿನಯದ ಬಂಗಾರು ಸನ್ ಆಫ್ ಬಂಗಾರದ ಮನುಷ್ಯ ಸಿನಿಮಾ ವೀಕ್ಷಿಸಿದರು.
ಈ ಮೊದಲು ರಾಜ್'ಕುಮಾರ್ ಅಭಿನಯದ ಬಂಗಾರದ ಮನುಷ್ಯ ಸಿನಿಮಾ ನೋಡಿದ್ದೆ. ಆ ಚಿತ್ರದ ಪ್ರೇರಣೆಯಿಂದ ಈ ಸಿನಿಮಾವನ್ನು ನೋಡಲು ಬಂದೆದ್ದೇನೆ'. ಇನ್ನೆರಡು ದಿನಗಳ ನಂತರ ಪುನೀತ್ ಅಭಿನಯದ ರಾಜಕುಮಾರ ಚಿತ್ರವನ್ನು ನೋಡುತ್ತೇನೆ ಎಂದು ತಿಳಿಸಿದರು.
ಗೌಡರೊಂದಿಗೆ ರೈತ ಸಂಘದ ಮುಖಂಡ ನಂಜುಂಡೇಗೌಡ, ಮೇಯರ್ ರವಿಕುಮಾರ್, ಎಂ.ಎಲ್.ಸಿ ಶ್ರೀಕಂಠೇಗೌಡ ಸಿನಿಮಾ ನೋಡಿದರು.