ಜಿಎಸ್​ಟಿಯಿಂದ ಆಗಿರುವ ಅನಾಹುತದ ಬಗ್ಗೆ ಯೋಚಿಸಬೇಕು. ಇದರಲ್ಲಿ ಸಂಸದರಾದ ನಮ್ಮ ಕರ್ತವ್ಯ ಕೂಡ ಇದೆ. ಪ್ರಧಾನಿ ಭೇಟಿ ಮಾಡಿ ಈ ವಿಚಾರವನ್ನು ಗಮನಕ್ಕೆ ತರುತ್ತೇನೆ. ಹೋರಾಟಕ್ಕೆ ಪ್ರಸನ್ನ ಜೊತೆ ನಾನೂ ಕೂಡಾ ಕೈಜೋಡಿಸುತ್ತೇನೆ.

ಬೆಂಗಳೂರು(ಅ.18): ನಗರದ ಬಸವನಗುಡಿಯಲ್ಲಿರುವ ನಿಡುಮಾಮಿಡಿ ಮಠದಲ್ಲಿ ರಂಗಕರ್ಮಿ ಪ್ರಸನ್ನ ಅವರು ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಭೇಟಿ ಮಾಡಿ ಸತ್ಯಾಗ್ರಹ ಕೈಬಿಡಿವಂತೆ ಮನವಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಕೈ ಮಗ್ಗ ವಸ್ತುಗಳನ್ನು ಹಳ್ಳಿ, ನಗರ ಜನರು ಬಳಸುತ್ತಾರೆ. ಕೈ ಉತ್ಪನ್ನಗಳಿಗೆ ಜಿಎಸ್​​ಟಿ ಹಾಕಿದರೆ ಉತ್ಪಾದಕರಿಗೆ ಸಂಕಷ್ಟ. ಉತ್ಪಾದಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಜಿಎಸ್​ಟಿ ಜಾರಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಾರೀ ಹೆಮ್ಮೆ ಇದೆ. ಜಿಎಸ್​ಟಿಯಿಂದ ಆಗಿರುವ ಅನಾಹುತದ ಬಗ್ಗೆ ಯೋಚಿಸಬೇಕು. ಇದರಲ್ಲಿ ಸಂಸದರಾದ ನಮ್ಮ ಕರ್ತವ್ಯ ಕೂಡ ಇದೆ. ಪ್ರಧಾನಿ ಭೇಟಿ ಮಾಡಿ ಈ ವಿಚಾರವನ್ನು ಗಮನಕ್ಕೆ ತರುತ್ತೇನೆ. ಹೋರಾಟಕ್ಕೆ ಪ್ರಸನ್ನ ಜೊತೆ ನಾನೂ ಕೂಡಾ ಕೈಜೋಡಿಸುತ್ತೇನೆ. ಉಪವಾಸ ಸತ್ಯಾಗ್ರಹವನ್ನು ಬಿಡುವಂತೆ ಮನವಿ ಮಾಡಿದ್ದೇನೆ. ನಾಳೆ ಸಂಜೆ ಉಪವಾಸ ಕೈ ಬಿಡುವುದಾಗಿ ಹೇಳಿದ್ದಾರೆ' ಎಂದು ತಿಳಿಸಿದ್ದಾರೆ.