ರೇವಣ್ಣರದ್ದು ಅದೇ ಗೋಳು... ಅಂದು ಬಿಸ್ಕೇಟ್.. ಇಂದು 'ಬೆಲ್ಲಾಟ'!
ಅಂದು ಬಿಸ್ಕೆಟ್ ಎಸೆದು ಸುದ್ದಿಯಾಗಿದ್ದ ರೇವಣ್ಣರ ಮತ್ತೊಂದು ನಿರ್ಲಕ್ಷ್ಯ| ನಿರಾಶ್ರಿತರ ಕೇಂದ್ರದಲ್ಲಿ ರೇವಣ್ಣನ ಮತ್ತೊಂದು ನಿರ್ಲಕ್ಷ್ಯ ಬಯಲು| ಸಂತ್ರಸ್ತೆ ಅಳಲು ತೋಡಿಕೊಳ್ಳುತ್ತಿದ್ರೆ ಮೇಜಿನ ಮೇಲಿದ್ದ ಬೆಲ್ ಹಿಡಿದು ಆಟ ಆಡ್ತಿದ್ದ ಎಚ್ ಡಿ ರೇವಣ್ಣ
ಬೆಂಗಳೂರು[ಆ.21]: ಒಂದು ವರ್ಷದ ಹಿಂದೆ ಕೊಡಗು ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಸುದ್ದಿಯಾಗಿದ್ದ ಮಾಜಿ ಸಚಿವ ರೇವಣ್ಣ, ಇದೀಗ ಮತ್ತೊಮ್ಮೆ ನಿರ್ಲಕ್ಷ್ಯದಿಂದ ಸದ್ದು ಮಾಡಿದ್ದಾರೆ.
ಹೌದು ಗೋಕಾಕ ಪಟ್ಟಣದ ಪರಿಹಾರ ಕೇಂದ್ರದಲ್ಲಿ ಎಚ್. ಡಿ. ರೇವಣ್ಣ ಭೇಟಿ ನೀಡಿದ್ದಾರೆ. ಈ ವೇಳೆ ಸಂತ್ರಸ್ತೆಯೊಬ್ಬಳು ತನ್ನ ಅಳಲು ತೋಡಿಕೊಳ್ಳುತ್ತಿದ್ದಾಗ, ಮೇಜಿನ ಮೇಲಿದ್ದ ಬೆಲ್ ಹಿಡಿದು ಆಟವಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.
"
ರೇವಣ್ಣರ ಈ ನಿರ್ಲಕ್ಷ್ಯವನ್ನು ಗಮನಿಸಿದ ಸಂತ್ರಸ್ತೆ ಕೊನೆಗೆ ಕೋನರೆಡ್ಡಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.