Asianet Suvarna News Asianet Suvarna News

ರೇವಣ್ಣರದ್ದು ಅದೇ ಗೋಳು... ಅಂದು ಬಿಸ್ಕೇಟ್.. ಇಂದು 'ಬೆಲ್ಲಾಟ'!

ಅಂದು ಬಿಸ್ಕೆಟ್ ಎಸೆದು ಸುದ್ದಿಯಾಗಿದ್ದ ರೇವಣ್ಣರ ಮತ್ತೊಂದು ನಿರ್ಲಕ್ಷ್ಯ| ನಿರಾಶ್ರಿತರ ಕೇಂದ್ರದಲ್ಲಿ ರೇವಣ್ಣನ ಮತ್ತೊಂದು ನಿರ್ಲಕ್ಷ್ಯ ಬಯಲು| ಸಂತ್ರಸ್ತೆ ಅಳಲು ತೋಡಿಕೊಳ್ಳುತ್ತಿದ್ರೆ ಮೇಜಿನ ಮೇಲಿದ್ದ ಬೆಲ್ ಹಿಡಿದು ಆಟ ಆಡ್ತಿದ್ದ ಎಚ್ ಡಿ ರೇವಣ್ಣ

HD Revanna Shows His Negligence Behaviour In Front Of Flood Victims Of Gokak
Author
Bangalore, First Published Aug 21, 2019, 3:20 PM IST

ಬೆಂಗಳೂರು[ಆ.21]: ಒಂದು ವರ್ಷದ ಹಿಂದೆ ಕೊಡಗು ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಎಸೆದು ಸುದ್ದಿಯಾಗಿದ್ದ ಮಾಜಿ ಸಚಿವ ರೇವಣ್ಣ, ಇದೀಗ ಮತ್ತೊಮ್ಮೆ ನಿರ್ಲಕ್ಷ್ಯದಿಂದ ಸದ್ದು ಮಾಡಿದ್ದಾರೆ. 

ಹೌದು ಗೋಕಾಕ ಪಟ್ಟಣದ ಪರಿಹಾರ ಕೇಂದ್ರದಲ್ಲಿ ಎಚ್. ಡಿ. ರೇವಣ್ಣ ಭೇಟಿ ನೀಡಿದ್ದಾರೆ. ಈ ವೇಳೆ ಸಂತ್ರಸ್ತೆಯೊಬ್ಬಳು ತನ್ನ ಅಳಲು ತೋಡಿಕೊಳ್ಳುತ್ತಿದ್ದಾಗ, ಮೇಜಿನ ಮೇಲಿದ್ದ ಬೆಲ್ ಹಿಡಿದು ಆಟವಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. 

"

ರೇವಣ್ಣರ ಈ ನಿರ್ಲಕ್ಷ್ಯವನ್ನು ಗಮನಿಸಿದ ಸಂತ್ರಸ್ತೆ ಕೊನೆಗೆ ಕೋನರೆಡ್ಡಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

Follow Us:
Download App:
  • android
  • ios