ರೋಗಿಗಳ‌ ಸಾವು ನೋವು ಸಂಭವಿಸುತ್ತಿವೆ.  ಹೀಗಿದ್ದು ಸರ್ಕಾರ ಕಣ್ಣುಮುಚ್ಚಿ ಕೂರುವುದು ಸರಿಯಲ್ಲ ಎಂದು ಸರ್ಕಾರವನ್ನು ಹೈಕೋರ್ಟ್ ತರಾಟರಗೆ ತೆಗೆದುಕೊಂಡಿದೆ.  ವೈದ್ಯ ಮುಷ್ಕರದ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಏನು ಕೈಗೊಂಡಿದ್ದೀರಾ ? ಈ ಕುರಿತು ವರದಿ ನೀಡುವಂತೆ  ಹೈಕೋರ್ಟ್  ತಾಕೀತು ಮಾಡಿದೆ.  ವರದಿ ಸಲ್ಲಿಸಲು  ಅಡ್ವೋಕೇಟ್ ಜನರಲ್ ಕಾಲಾವಕಾಶ ಕೇಳಿದ್ದು​​  ಸೋಮವಾರ ಸಮಗ್ರ ವರದಿ ಸಲ್ಲಿಸುವುದಾಗಿ ಹೈಕೋರ್ಟ್​ಗೆ ಎಜಿ ಹೇಳಿದ್ದಾರೆ.

ಬೆಂಗಳೂರು (ನ.17): ರೋಗಿಗಳ‌ ಸಾವು ನೋವು ಸಂಭವಿಸುತ್ತಿವೆ.  ಹೀಗಿದ್ದು ಸರ್ಕಾರ ಕಣ್ಣುಮುಚ್ಚಿ ಕೂರುವುದು ಸರಿಯಲ್ಲ ಎಂದು ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವೈದ್ಯ ಮುಷ್ಕರದ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಏನು ಕೈಗೊಂಡಿದ್ದೀರಾ ? ಈ ಕುರಿತು ವರದಿ ನೀಡುವಂತೆ  ಹೈಕೋರ್ಟ್  ತಾಕೀತು ಮಾಡಿದೆ.  ವರದಿ ಸಲ್ಲಿಸಲು  ಅಡ್ವೋಕೇಟ್ ಜನರಲ್ ಕಾಲಾವಕಾಶ ಕೇಳಿದ್ದು​​  ಸೋಮವಾರ ಸಮಗ್ರ ವರದಿ ಸಲ್ಲಿಸುವುದಾಗಿ ಹೈಕೋರ್ಟ್​ಗೆ ಎಜಿ ಹೇಳಿದ್ದಾರೆ.

ಖಾಸಗಿ ವೈದ್ಯರ ಮುಷ್ಕರ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್'ನ್ನು  ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.  

ಮುಷ್ಕರ ಸ್ಥಗಿತಗೊಳಿಸಲು ಹೈಕೋರ್ಟ್ ವೈದ್ಯರಿಗೆ 10 ನಿಮಿಷಗಳ ಗಡುವು ನೀಡಿದೆ.  ಮುಷ್ಕರ  ನಿರತ ವೈದ್ಯರಿಗೆ ಹೈಕೋರ್ಟ್​ ಖಡಕ್ ಎಚ್ಚರಿಕೆ ನೀಡಿದ್ದು, ಮುಷ್ಕರ ಬಿಟ್ಟು ಮೊದಲು  ಜನ ಸೇವೆ ಮಾಡಿ.  ಮುಷ್ಕರ ನಿಲ್ಲಿಸಿ ಸೇವೆ ಸಲ್ಲಿಸಿ, ಇಲ್ಲ ಅಂದ್ರೆ ಕೋರ್ಟ್ ಸೂಕ್ತ ಕ್ರಮ ಕೈಗೊಳ್ಳತ್ತೆ.  ನೀವು ಜೀವ ರಕ್ಷಕರೋ ? ಜೀವ ತೆಗೆಯೋರೋ ? ಕಾಯ್ದೆಯಲ್ಲಿ ತಿದ್ದುಪಡಿ, ಅಥವಾ ಕೈಬಿಡುವ ಅಂಶಗಳಿದ್ದರೆ ಕೋರ್ಟಿನಲ್ಲಿ ಪ್ರಶ್ನಿಸಬಹುದಿತ್ತು.  ಅದೆಲ್ಲವನ್ನು ಬಿಟ್ಟು ವೃತ್ತಿಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೀರಾ ? ಇದು ನಿಮಗೆ ಸರಿ ಕಾಣುತ್ತಿದೆಯಾ? ವಿಧೇಯಕದಲ್ಲಿ  ಸಮಸ್ಯೆ ಇದ್ದರೆ ನಾವೇ ಕೈಬಿಡೋಣ. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಎಂದು ಹೈಕೋರ್ಟ್ ವೈದ್ಯರಿಗೆ ಸೂಚನೆ ನೀಡಿದೆ.  

ಸರ್ಕಾರದ ನಿಲುವೇನು ಎಂಬುದನ್ನು ಸಂಜೆ 4.30 ಕ್ಕೆ ತಿಳಿಸಲು  ಹೈಕೋರ್ಟ್ ಎಜಿಗೆ ಸೂಚಿಸಿದೆ.