ಮರುದಿನ ಪರೀಕ್ಷೆಯಲ್ಲಿ ಆ ಪ್ರಶ್ನೆಗಳೂ ಇದ್ದವು ಎಂದು ಸ್ವತಃ ಸುಮನ್ ಅವರೇ ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಜೆ. ವಜಿಫ್‌'ದಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.

ನವದೆಹಲಿ(ಆ.20):ಹರ್ಯಾಣ ನಾಗರಿಕ ಸೇವೆಗಳ (ನ್ಯಾಯಾಂಗ ವಿಭಾಗ) ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಮಧ್ಯವರ್ತಿಗಳು 1 ಕೋಟಿ ರು. ಬೆಲೆ ನಿಗದಿಪಡಿಸಿದ್ದ ಸಂಗತಿ ಹರ್ಯಾಣದಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣ ಇದೀಗ ಕೋರ್ಟ್ ಮೆಟ್ಟಿಲೇರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಜು.16ರಂದು ಪರೀಕ್ಷೆ ನಿಗದಿಯಾಗಿತ್ತು. ಸುಮನ್ ಎಂಬಾಕೆ ಅಭ್ಯರ್ಥಿಯಾಗಿದ್ದರು. ಅವರನ್ನು ಸುಶೀಲಾ ಹಾಗೂ ಸುನೀತಾ ಎಂಬ ಇಬ್ಬರು ಸಂಪರ್ಕಿಸಿ, ಪ್ರಶ್ನೆ ಪತ್ರಿಕೆ ಬೇಕು ಎಂದರೆ 1 ಕೋಟಿ ರು.ನೀಡುವಂತೆ ಹೇಳಿದ್ದರು. ಅಲ್ಲದೆ ಅವರು ಜು.15ರಂದು ಕನಿಷ್ಠ ಎರಡು ಪ್ರಶ್ನೆಗಳನ್ನು ನೀಡಿದ್ದರು.

ಮರುದಿನ ಪರೀಕ್ಷೆಯಲ್ಲಿ ಆ ಪ್ರಶ್ನೆಗಳೂ ಇದ್ದವು ಎಂದು ಸ್ವತಃ ಸುಮನ್ ಅವರೇ ಹರ್ಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಜೆ. ವಜಿಫ್‌'ದಾರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಆಂತರಿಕ ತನಿಖೆಗೆ ಮುಖ್ಯ ನ್ಯಾಯಮೂರ್ತಿ ಆದೇಶಿಸಿದ್ದಾರೆ. ಈ ನಡುವೆ, ಏಕಸದಸ್ಯ ಪೀಠ ಕೂಡ ಈ ಬಗ್ಗೆ ವಿಚಾರಣೆ ಆರಂಭಿಸಿದೆ