Asianet Suvarna News Asianet Suvarna News

ಖುಲಾಸೆ ಬಳಿಕ ಬಾಂಬ್ ಸಿಡಿಸಿದ ಹರತಾಳು ಹಾಲಪ್ಪ: ಬಯಲಾಗುತ್ತಾ ಮತ್ತೊಬ್ಬ ಜನನಾಯಕನ ಸೀಕ್ರೆಟ್ ಸಂಸಾರ?

ರಾಜ್ಯದ ಗಮನ ಸೆಳೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಯಾದ ಮಾಜಿ ಶಾಸಕ ಹರತಾಳು ಹಾಲಪ್ಪ ತಮ್ಮ ತವರು ಕ್ಷೇತ್ರ ಸೊರಬದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡ್ರು. ಹುಟ್ಟೂರು ಹೊಳೆಕೊಪ್ಪದಿಂದ ಸೊರಬ ಪಟ್ಟಣದವರೆಗೆ ಸುಮಾರು 20 ಕಿ.ಮೀ.ದೂರ ನೂರಾರು ಸಂಖ್ಯೆಯಲ್ಲಿ ಬೈಕ್ ರ್ಯಾಲಿಯಲ್ಲಿ ಮೆರವಣಿಗೆ ನಡೆಸಿದ ಬಳಿಕ ಬಹಿರಂಗ ಸಬೆ ನಡೆಸಿದರು. ಈ ವೇಳೆ ಅವರಾಡಿದ ಮಾತುಗಳು ರಿವೇಂಜ್ ಪಾಲಿಟಿಕ್ಸ್ ಮಾಡುತ್ತಿದ್ದರಾ ಎಂಬ ಻ ನುಮಾನಗಳನ್ನುಮೂಡಿಸಿದೆ.

Haratalu Halappa Revealed A Secret Information

ಶಿವಮೊಗ್ಗ(ಆ.23): ರಾಜ್ಯದ ಗಮನ ಸೆಳೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಯಾದ ಮಾಜಿ ಶಾಸಕ ಹರತಾಳು ಹಾಲಪ್ಪ ತಮ್ಮ ತವರು ಕ್ಷೇತ್ರ ಸೊರಬದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡ್ರು. ಹುಟ್ಟೂರು ಹೊಳೆಕೊಪ್ಪದಿಂದ ಸೊರಬ ಪಟ್ಟಣದವರೆಗೆ ಸುಮಾರು 20 ಕಿ.ಮೀ.ದೂರ ನೂರಾರು ಸಂಖ್ಯೆಯಲ್ಲಿ ಬೈಕ್ ರ್ಯಾಲಿಯಲ್ಲಿ ಮೆರವಣಿಗೆ ನಡೆಸಿದ ಬಳಿಕ ಬಹಿರಂಗ ಸಬೆ ನಡೆಸಿದರು. ಈ ವೇಳೆ ಅವರಾಡಿದ ಮಾತುಗಳು ರಿವೇಂಜ್ ಪಾಲಿಟಿಕ್ಸ್ ಮಾಡುತ್ತಿದ್ದರಾ ಎಂಬ ಻ ನುಮಾನಗಳನ್ನುಮೂಡಿಸಿದೆ.

ಈ ಸಭೆಯಲ್ಲೇ ಹೆಸರು ಹೇಳದೆ ಜೆಡಿಎಸ್ ಶಾಸಕ ಮಧು ಬಂಗಾರಪ್ಪ ವಿರುದ್ಧ ಹಾಲಪ್ಪ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧ ಷಡ್ಯಂತ್ರ ನಡೆಸಿದ್ರು ಎಂದು ಆರೋಪಿಸಿದ್ದಾರೆ. ಇದೇ ವೇಳೆ ಮಧು ಬಂಗಾರಪ್ಪ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಅವರ ಜೀವನದಲ್ಲಿ ಜೋಸೆಫ್ ಮೇರಿ ಯಾರು..? ಅವರು ಯಾರೆಂದು? ಅವರ ಮನೆ ದೇವರು ಚಂದ್ರಗುತ್ತಿ ದೇವರ ಮೇಲೆ ಆಣೆ ಮಾಡುತ್ತಾರಾ ಎಂದು ಸವಾಲು ಹಾಕಿದ್ದಾರೆ.

Follow Us:
Download App:
  • android
  • ios