ಮಂಗಳೂರು(ಅ.7): ದೇವೇಗೌಡ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕೊಲ್ಲೂರಿನಿಂದ ಬೆಂಗಳೂರಿಗೆ ದೇವೇಗೌಡರು ಬರುತ್ತಿದ್ದಾಗ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದೆ. ನಂತರ ವಿಮಾನದ ಮೂಲಕ ಗೌಡರು ಬೆಂಗಳೂರಿಗೆ ತೆರಳಿದರು. ಪತ್ನಿ ಚೆನ್ನಮ್ಮ ಜೊತೆ ಕೊಲ್ಲೂರಿಗೆ ತೆರಳಿದ್ದ ದೇವೇಗೌಡರು ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಸ್ ಆಗುತ್ತಿದ್ದರು.
Add Asianetnews Kannada as a Preferred Source

