ರಾಜ್ಯದ ಪ್ರತಿ ತಾಲೂಕಿನ ಐದು ಸಾವಿರ ಕುಟುಂಬಗಳಿಗೆ ಗಿರಿರಾಜ ಹಾಗೂ ನಾಟಿ ತಳಿಯ ಕೋಳಿಗಳನ್ನು ವಿತರಿಸುವ ಮೂಲಕ ಆ ಕುಟುಂಬಗಳನ್ನು ಆರ್ಥಿಕ ಸಬಲರನ್ನಾಗಿಸಲು ಹೊಸ ಯೋಜನೆ ರೂಪಿಸಲಾಗುತ್ತಿದೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಎ.ಮಂಜು ಹೇಳಿದ್ದಾರೆ.

ಧಾರವಾಡ: ರಾಜ್ಯದ ಪ್ರತಿ ತಾಲೂಕಿನ ಐದು ಸಾವಿರ ಕುಟುಂಬಗಳಿಗೆ ಗಿರಿರಾಜ ಹಾಗೂ ನಾಟಿ ತಳಿಯ ಕೋಳಿಗಳನ್ನು ವಿತರಿಸುವ ಮೂಲಕ ಆ ಕುಟುಂಬಗಳನ್ನು ಆರ್ಥಿಕ ಸಬಲರನ್ನಾಗಿಸಲು ಹೊಸ ಯೋಜನೆ ರೂಪಿಸಲಾಗುತ್ತಿದೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಎ.ಮಂಜು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಯಾಪುರ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಪ್ರಾದೇಶಿಕ ಕೇಂದ್ರದಲ್ಲಿ ಭಾನುವಾರ ₹93 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕುಕ್ಕುಟ ಸಾಕಣೆ ತರಬೇತಿ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಬರಗಾಲ, ಕೃಷಿ ಕಾರ್ಮಿಕರ ಕೊರತೆ, ಮತ್ತಿತರೆ ಕಾರಣಗಳಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಳಿ, ಕುರಿ, ಜಾನುವಾರು ಸಾಕಣೆ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕಿದೆ. ಈಗಾಗಲೇ ಭೂ ಸಮೃದ್ಧಿ ಗ್ರಾಮ, ಪಶು ಭಾಗ್ಯದ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದು, ಅದೇ ರೀತಿ ತಾಲೂಕಿನ ಆಯ್ದ 5 ಸಾವಿರ ಕುಟುಂಬಗಳಿಗೆ ಕೋಳಿಗಳನ್ನು ನೀಡಲಾಗುವುದು.

ತಮ್ಮ ಹಿತ್ತಲುಗಳಲ್ಲೇ ಅವುಗಳನ್ನು ಸಾಕಿಕೊಳ್ಳಬೇಕು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಕೆಲವೆಡೆ ರೈತರು ಕಷ್ಟಪಟ್ಟು ಕೋಳಿ ಸಾಕಿದರೆ ಖಾಸಗಿ ಕಂಪನಿಯವರು ಅವರಿಂದ ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಮಾರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಕೆಲ ನಿಯಮಗಳನ್ನು ರೂಪಿಸಲಾಗುವುದು ಎಂದರು.