ಸುವರ್ಣ ಬಿಗ್ ಇಂಪ್ಯಾಕ್ಟ್ : ಜಗಿಯುವ ತಂಬಾಕು ನಿಷೇಧಿಸಿದ ಸರ್ಕಾರ
ಸೆಪ್ಟೆಂಬರ್ 23 ರಂದು ಕವರ್ ಸ್ಟೋರಿ ಪ್ರಸಾರದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತಿದೆ. ಇದೀಗ ಮಾರಕ ಟೊಬ್ಯಾಕೋ ಬ್ಯಾನ್ ಮಾಡಿ ಅಧಿಕೃತವಾಗಿ ಆದೇಶ ಹೊರಡಿಸಿದೆ.
ಬೆಂಗಳೂರು(ಅ.26): ರಾಜ್ಯ ಸರ್ಕಾರ ಜಗಿಯುವ ತಂಬಾಕು ನಿಷೇಧಿಸಿ ಆದೇಶ ಹೊರಡಿಸಿದೆ. ತಂಬಾಕು ಮರಾಟ, ಸಂಗ್ರಹವನ್ನೂ ಮಾಡುವಂತಿಲ್ಲ ಅಂತ ಆದೇಶದಲ್ಲಿ ಸೂಚಿಸಲಾಗಿದೆ. ಈ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ರವಾನೆಯಾಗಿದೆ. ತಿನ್ನೋ ತಂಬಾಕಿನಲ್ಲಿ ನಕಲಿ ಮಾಡಲಾಗುತ್ತೆ. ಕಳಪೆ ಪದಾರ್ಧಗಳ ಸೇರ್ಪಡೆಯಿಂದ ಆರೋಗ್ಯ ಹಾಳಾಗುತ್ತೆ ಅಂತ ಸುವರ್ಣ ನ್ಯೂಸ್ ಕವರ್ ಸ್ಟೋರಿ ಸ್ಟೋರಿ ತಂಡ ಸಾಕ್ಷಿ ಸಮೇತ ವರದಿ ಮಾಡಿತ್ತು. ಸೆಪ್ಟೆಂಬರ್ 23 ರಂದು ಕವರ್ ಸ್ಟೋರಿ ಪ್ರಸಾರದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತಿದೆ. ಇದೀಗ ಮಾರಕ ಟೊಬ್ಯಾಕೋ ಬ್ಯಾನ್ ಮಾಡಿ ಅಧಿಕೃತವಾಗಿ ಆದೇಶ ಹೊರಡಿಸಿದೆ.