ಮಿತಭಾಷಿಯೆಂದೇ ಜನಜನಿತರಾದ ಮೌನವನ್ನೇ ಹೆಚ್ಚು ಇಷ್ಟಪಡುವ ರಾಜ್ಯಪಾಲ ವಾಜುಬಾಯಿ ಆರ್ .ವಾಲಾ ಅವರು ತಮ್ಮೂರು ಗುಜರಾತಿನ ಜನಪದ ನೃತ್ಯ ಮಾಡಿ ಪ್ರೇಕ್ಷಕರಲ್ಲಿ ಆಚ್ಚರಿ ಮೂಡಿಸಿದರು.
ಶ್ರವಣಬೆಳಗೊಳ (ಜು.07): ಮಿತಭಾಷಿಯೆಂದೇ ಜನಜನಿತರಾದ ಮೌನವನ್ನೇ ಹೆಚ್ಚು ಇಷ್ಟಪಡುವ ರಾಜ್ಯಪಾಲ ವಾಜುಬಾಯಿ ಆರ್ .ವಾಲಾ ಅವರು ತಮ್ಮೂರು ಗುಜರಾತಿನ ಜನಪದ ನೃತ್ಯ ಮಾಡಿ ಪ್ರೇಕ್ಷಕರಲ್ಲಿ ಆಚ್ಚರಿ ಮೂಡಿಸಿದರು.
ಶುಕ್ರವಾರ ಶ್ರವಣಬೆಳಗೊಳದಲ್ಲಿ ನಡೆದ ಕಾರ್ಯಕ್ರಮದ ಮಧ್ಯೆ ವರ್ಣರಂಜಿತ ವೇಷಭೂಷಣ ತೊಟ್ಟಿದ್ದ ಯುವಕ- ಯುವತಿಯರು ಅತ್ಯಾಮೋಘವಾಗಿ ತಮ್ಮದೇ ಶೈಲಿಯಲ್ಲಿ ನರ್ತಿಸುತ್ತಿದ್ದರು. ಕೆಲ ನಿಮಿಷ ನೃತ್ಯ ನೋಡಿದ ರೋಮಾಂಚನರಾದ ರಾಜ್ಯಪಾಲರು, ಡ್ಯಾನ್ಸ್ ಕರ್ತಾ ವೂ (ನಾನು ಡ್ಯಾನ್ಯ್ ಮಾಡುತ್ತೇನೆ ) ಎಂದು ಹಿಂದಿ ಭಾಷೆಯಲ್ಲಿ ಹೇಳಿದರು. ಅದಕ್ಕೆ ವೇದಿಕೆಯಲ್ಲಿ ಶೀ ಕ್ಷೇತ್ರದ ಚಾರುಕೀರ್ತಿ ಸ್ವಾಮೀಜಿ ಮತ್ತಿತರರು.. ಕೀಜಿಯೇ .. ಎಂದರು.
ಹಾಗೆನ್ನುವ ಮೊದಲೇ ಎದ್ದು ನಿಂತಿದ್ದ 75 ರ ಹರೆಯದ ರಾಜ್ಯಪಾಲರು ಪೊಲೀಸ್ ಬೆಂಗಾವಲನ್ನು ದಾಟಿ ಕಲಾವಿದರ ಮಧ್ಯೆ ಸೇರಿಕೊಂಡು ಸುಮಾರು 4 ನಿಮಿಷ ನರ್ತಿಸಿದರು.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಹಿರಿಯ ಸಾಹಿತಿ ಡಾ. ಹಂಪಾ ನಾಗರಾಜಯ್ಯ ಸಚಿವ ಎ.ಮಂಜು, ಶಾಸಕರಾದ ಸಿ.ಎನ್ .ಬಾಲಕೃಷ್ಣ, ಎ.ಎಂ.ಗೋಪಾಲಸ್ವಾಮಿ ಮತ್ತಿತರ ಗಣ್ಯರು ರಾಜ್ಯಪಾಲರ ಸುತ್ತ ನಿಂತು ಚಪ್ಪಾಲೆ ತಟ್ಟುತ್ತಾ ರಾಜ್ಯಪಾಲರ ನೃತ್ಯಕ್ಕೆ ಪ್ರೋತ್ಸಾಹ ನೀಡಿದರು.
Add Asianetnews Kannada as a Preferred Source

