ಪ್ರೀತಿಯ ವಿಷಯದಲ್ಲಿ ಚಲ್ಲಾಟವಾಡಿದ ಯುವಕನಿಗೆ ಯುವತಿ ಸಾವಿನ ಬಾಗಿಲು ತೋರಿಸಿದ್ದಾಳೆ. ಮೈಸೂರಿನ ಯುವತಿ ಶೃತಿಗೆ ಕಳೆದ ಮೂರು ವರ್ಷಗಳ ಹಿಂದೆ ಪರಿಚಯವಾಗಿದ್ದ ಮನ್ಸೂರ್​ ಜೊತೆ ಪ್ರೀತಿ ಚಿಗುರಿತ್ತು. ಪ್ರೀತಿ ಪ್ರಣಯಕ್ಕೆ ತಿರುಗಿದಾಗ ಶೃತಿ ಗರ್ಭಿಣಿಯಾಗಿದ್ದಳು.

ಬೆಂಗಳೂರು(ಡಿ.07): ಪ್ರೀತಿಯ ವಿಷಯದಲ್ಲಿ ಚಲ್ಲಾಟವಾಡಿದ ಯುವಕನಿಗೆ ಯುವತಿ ಸಾವಿನ ಬಾಗಿಲು ತೋರಿಸಿದ್ದಾಳೆ. ಮೈಸೂರಿನ ಯುವತಿ ಶೃತಿಗೆ ಕಳೆದ ಮೂರು ವರ್ಷಗಳ ಹಿಂದೆ ಪರಿಚಯವಾಗಿದ್ದ ಮನ್ಸೂರ್​ ಜೊತೆ ಪ್ರೀತಿ ಚಿಗುರಿತ್ತು. ಪ್ರೀತಿ ಪ್ರಣಯಕ್ಕೆ ತಿರುಗಿದಾಗ ಶೃತಿ ಗರ್ಭಿಣಿಯಾಗಿದ್ದಳು.

 ಮದುವೆಯ ಪ್ರಸ್ತಾಪ ಬಂದಾಗ, ಮನ್ಸೂರ್ ನಿರಾಕರಿಸಿದ್ದ. ಶೃತಿ ಕಾಡಿ ಬೇಡಿ ಸತಾಯಿಸಿದರೂ, ಮನ್ಸೂರ್ ಮಾತ್ರ ಯಾವುದೇ ಕಾರಣಕ್ಕೂ ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾನೆ. ಏನಿಲ್ಲದಿದ್ದರೂ​ ಮದುವೆಯಾಗಿ ನನ್ನನ್ನು ಬಿಟ್ಟು ಬಿಡು ಎಂದೂ ಶೃತಿ ಗೋಗೆರೆದಿದ್ದಾಳೆ. ಆದರೆ ಮನ್ಸೂರ್ ಮಾತ್ರ ಇದ್ಯಾವುದಕ್ಕೂ ಕರಗಲೇ ಇಲ್ಲ.

ಹೀಗಾಗಿ ಶೃತಿ ಕಳೆದ 27 ರಂದು ಮನ್ಸೂರ್​ನನ್ನು ಶ್ರೀ ಕೃಷ್ಣ ಲಾಡ್ಜ್​'ಗೆ ಕರೆಸಿ RIVOTRIC ಎಂಬ ಮಾತ್ರೆಯನ್ನು ಜ್ಯೂಸ್'ನಲ್ಲಿ ಹಾಕಿ ಕುಡಿಸಿದ್ದಾಳೆ. ಮಾತ್ರೆಯ ನಶೆಯಿಂದ ಕೆಲವೇ ಕ್ಷಣಗಳಲ್ಲಿ ನಿದ್ದೆಗೆ ಜಾರಿದ ಮನ್ಸೂರ್​ ಮೇಲೆ ಪೆಟ್ರೋಲ್​ ಹಾಕಿ ಬೆಂಕಿ ಹಚ್ಚುತ್ತಾಳೆ. ಈ ವೇಳೆ ಶೃತಿ, ಬಾತ್'​ರೂಮ್​ಸೇರಿಕೊಂಡು ಪ್ರಾಣ ಉಳಿಸಿಕೊಳ್ಳುತ್ತಾಳೆ.

ಶೇಕಡಾ 40 ರಷ್ಟು ಸುಟ್ಟಿದ್ದ ಮನ್ಸೂರ್'ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಡಿಸೆಂಬರ್ 1 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಕಾಟನ್​ಪೇಟೆ ಪೊಲೀಸರು ಆರೋಪಿ ಶೃತಿಯನ್ನು ಬಂಧಿಸಿದ್ದಾರೆ.