ಇದೇ ಹಿನ್ನಲೆಯಲ್ಲಿ ಕೆಲವು ಮಂದಿ ಜನರನ್ನು ಹಾದಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮದುವೆ-ಮುಂಜಿ ಕಾರ್ಯಕ್ರಮ ಇರುವವರು ಪೊಲೀಸ್ ಅನುಮತಿಯ ಮೇಲೆ 5 ಲಕ್ಷ ರೂ ವರೆಗೆ ಹಣವನ್ನು ಬ್ಯಾಂಕಿನಿಂದ ಹಿಂಪಡೆಯಬಹುದು ಎಂಬ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡುತ್ತಿದೆ. 

ನವದೆಹಲಿ(ನ.15): ದೇಶದಲ್ಲಿ 500 ರೂ ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ಸರಕಾರ ರದ್ದು ಮಾಡಿರುವ ಹಿನ್ನಲೆಯಲ್ಲಿ ಜನ ಸಾಮಾನ್ಯರ ದಿನ ನಿತ್ಯದ ಖರ್ಚು ವೆಚ್ಚಕ್ಕೂ ಕೈಯಲ್ಲಿ ಕಾಸಿಲ್ಲದ ಸ್ಥಿತಿ ನಿರ್ಮಾಣವಾಗಿದೆ. 

Add Asianetnews Kannada as a Preferred SourcegooglePreferred

ಇದೇ ಹಿನ್ನಲೆಯಲ್ಲಿ ಕೆಲವು ಮಂದಿ ಜನರನ್ನು ಹಾದಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮದುವೆ-ಮುಂಜಿ ಕಾರ್ಯಕ್ರಮ ಇರುವವರು ಪೊಲೀಸ್ ಅನುಮತಿಯ ಮೇಲೆ 5 ಲಕ್ಷ ರೂ ವರೆಗೆ ಹಣವನ್ನು ಬ್ಯಾಂಕಿನಿಂದ ಹಿಂಪಡೆಯಬಹುದು ಎಂಬ ಮೆಸೇಜ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ನಿಮ್ಮ ಎರಿಯಾದ ಡಿಎಸ್'ಪಿ ಅನುಮತಿಯನ್ನು ನೀಡಿದರೆ ನೀವು 5 ಲಕ್ಷದ ವರೆಗಿನ ಹಣವನ್ನು ಬದಲಾಯಿಸಿಕೊಳ್ಳಿ, ಇಲ್ಲ ಬ್ಯಾಂಕಿನಿಂದ ಹಿಂಪಡೆಯಬಹುದಾಗಿದೆ ಎನ್ನುವ ಮೆಸೇಜ್ ಗಳನ್ನು ಹರಿ ಬಿಡುತ್ತಿದ್ದಾರೆ. ಇದಕ್ಕೆ ದೆಹಲಿಯ ಉತ್ತರ ವಲಯದ ಡಿಸಿಪಿ ಈ ಕುರಿತಂತೆ ಟ್ವೀಟ್ ಮಾಡಿದ್ದು, ಈ ರೀತಿಯಲ್ಲಿ ಯಾವುದೇ ಸೌಲಭ್ಯಗಳು ಜಾರಿಯಲ್ಲಿ ಇಲ್ಲವೆಂದು ತಿಳಿಸಿದ್ದಾರೆ. 

ಇಂದೊಂದು ರೂಮರ್ ಆಗಿದ್ದು, ಯಾರು ಇಂತಹ ರೂಮರ್ ಗಳಿಗೆ ಕಿವಿ ಕೊಡಬಾರದು ಎಂದು ಮನವಿ ಮಾಡಿದ್ದಾರೆ. 

Scroll to load tweet…