ಅಪನಗದೀಕರಣದ ಸಾಹಸದಿಂದ ಆರ್ಥಿಕ ಕುಸಿತ: ಸಿಂಗ್
ಕಳೆದ ವರ್ಷದ ಅಪನಗದೀಕರಣದ ಸಾಹಸದಿಂದ ಭಾರತದ ಆರ್ಥಿಕತೆ ಕುಸಿತದ ಹಾದಿ ಹಿಡಿದಿದೆ. ಅಪನಗದೀಕರಣದ ಘೋಷಣೆಯ ಅಗತ್ಯವೇ ಇರಲಿಲ್ಲ ಎಂದು ಮೋದಿ ಸರ್ಕಾರ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹರಿಹಾಯ್ದಿದ್ದಾರೆ.
ಮೊಹಾಲಿ: ಕಳೆದ ವರ್ಷದ ಅಪನಗದೀಕರಣದ ಸಾಹಸದಿಂದ ಭಾರತದ ಆರ್ಥಿಕತೆ ಕುಸಿತದ ಹಾದಿ ಹಿಡಿದಿದೆ. ಅಪನಗದೀಕರಣದ ಘೋಷಣೆಯ ಅಗತ್ಯವೇ ಇರಲಿಲ್ಲ ಎಂದು ಮೋದಿ ಸರ್ಕಾರ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹರಿಹಾಯ್ದಿದ್ದಾರೆ.
ಇಲ್ಲಿ ಮಾತನಾಡಿದ ಮನಮೋಹನ್ ಸಿಂಗ್, ಕೆಲವು ಲ್ಯಾಟಿನ್ ಅಮೆರಿಕದ ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ನೋಟು ಅಪನಗದೀಕರಣ ಯಶಸ್ವಿಯಾಗಿಲ್ಲ. ಇದರ ಅಗತ್ಯತೆ ಇರಲಿಲ್ಲ. ನಾನು ಕೆಲವು ತಿಂಗಳ ಹಿಂದೆ ಊಹಿಸಿದಂತೆಯೇ ಅಪನಗದೀಕರಣದ ಪರಿಣಾಮ ಆರ್ಥಿಕತೆ ಕುಸಿದಿದೆ ಎಂದರು.