ಲೋಕಸಭೆಯಲ್ಲಿ ಸ್ಪೀಕರ್ ಕುರ್ಚಿಯೆಡೆಗೆ ಪೇಪರ್ ಎಸೆದ ಆರು ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಇಂದಿನಿಂದ 5 ದಿನಗಳವರೆಗೆ ಅಮಾನತುಗೊಳಿಸಿದ್ದಾರೆ. ಗೌರವ್ ಗೋಗೋಯ್, ಸುಶ್ಮಿತಾ ದೇವ್, ರಣಜೀತ್ ರಂಜನ್, ಅಧೀರ್ ರಂಜನ್, ಕೆ ಸುರೇಶ್ ಹಾಗೂ ಕೆ.ರಾಘವನ್ ಅಮಾನತುಗೊಂಡ ಸಂಸದರು.

ನವದೆಹಲಿ (ಜು.24): ಲೋಕಸಭೆಯಲ್ಲಿ ಸ್ಪೀಕರ್ ಕುರ್ಚಿಯೆಡೆಗೆ ಪೇಪರ್ ಎಸೆದ ಆರು ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಇಂದಿನಿಂದ 5 ದಿನಗಳವರೆಗೆ ಅಮಾನತುಗೊಳಿಸಿದ್ದಾರೆ. ಗೌರವ್ ಗೋಗೋಯ್, ಸುಶ್ಮಿತಾ ದೇವ್, ರಣಜೀತ್ ರಂಜನ್, ಅಧೀರ್ ರಂಜನ್, ಕೆ ಸುರೇಶ್ ಹಾಗೂ ಕೆ.ರಾಘವನ್ ಅಮಾನತುಗೊಂಡ ಸಂಸದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚಿಗೆ ನಡೆಯುತ್ತಿರುವ ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆ, ಬೋಫೊರ್ಸ್ ಪ್ರಕರಣಗಳ ಬಗ್ಗೆ ಲೋಕಸಭೆಯಲ್ಲಿ ಚರ್ಚಿಸುತ್ತಿರುವ ವೇಳೆ ಈ ಸಂಸದರು ಸ್ಪೀಕರ್ ಕುರ್ಚಿಯೆಡೆಗೆ ಪೇಪರ್ ಎಸೆದು ಕಲಾಪಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಹಾಗಾಗಿ ಸುಮಿತ್ರಾ ಮಹಾಜನ್ 6 ಮಂದಿ ಸಂಸದರನ್ನು ಅಮಾನತುಗೊಳಿಸಿದರು. ಇದರಿಂದ ಕುಪಿತಗೊಂಡ ಪ್ರತಿಪಕ್ಷ ನಾಯಕರು ಸದನದ ಬಾವಿಗಿಳಿದು ಘೋಷಣೆ ಕೂಗಿದರು.