ಈಜಲು ತೆರಳಿದ ಐವರು ಬಾಲಕರು ನೀರುಪಾಲು
ಅಗ್ನಿಶಾಮಕ ದಳ, ಪೊಲೀಸರಿಂದ ಶವಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ
ಬಂಟ್ವಾಳ(ನ.07): ನದಿಯಲ್ಲಿ ಈಜಲು ತೆರಳಿದ ಐವರು ಬಾಲಕರು ನೀರುಪಾಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮುಲ್ಲಾರಪಟ್ನದ ಬಳಿ ನಡೆದಿದೆ.
ಸವದ್ (16),ರಮೀಝ್ (15), ಅಜ್ಮಲ್ (15), ಅಸ್ಲಮ್ (16), ಮುದಸ್ಸಿರ್ (16) ಮೃತ ದುರ್ದೈವಿಗಳು. ಇವರು ಫಲ್ಗುಣಿ ನದಿಯಲ್ಲಿ ಈಜಲು ಹೋಗಿದ್ದರು. ಅಗ್ನಿಶಾಮಕ ದಳ, ಪೊಲೀಸರಿಂದ ಶವಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬಂಟ್ವಾಳ ಗ್ರಾ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.