ಭಾರತೀಯ ಸೇನೆ ನಾಗರಿಕರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿದ್ದು, ಅಂತರ ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಮಾನವೀಯ ಕಾನೂನುಗಳನ್ನು ಉಲ್ಲಂಘಿಸುತ್ತಿದೆ' 2003ರ ಕದನ ವಿರಾಮ ನೀತಿಗೆ ಬೆಲೆ ನೀಡಿ ಅಪ್ರೋಚೋದಿತ ದಾಳಿಗಳನ್ನು ನಿಲ್ಲಿಸಬೇಕು' ಎಂದು ಆಗ್ರಹಿಸಿದೆ.
ಶ್ರೀನಗರ(ಜೂ.01): ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕ್' ಸೇನೆ ಭಾರತೀಯ ಯೋಧರು ತಕ್ಕ ಉತ್ತರ ನೀಡಿದ್ದಾರೆ.
ಭೀಮ್'ಬೇರ್ ಹಾಗೂ ಬಾಟ್ಟೆಲ್ ವಲಯಗಳಲ್ಲಿ ಪಾಕ್ ಸೇನೆಯ ಅಪ್ರಚೋದಿತ ದಾಳಿಗೆ ತಿರುಗೇಟು ನೀಡಿದ ಭಾರತೀಯ ಸೇನೆ ಐವರು ಯೋಧರನ್ನು ಹತ್ಯೆ ಮಾಡಿದೆ. ಈ ಘಟನೆಯನ್ನು ಖಂಡಿಸಿರುವ ಪಾಕಿಸ್ತಾನ ಉಪ ರಾಯಭಾರಿ ಡಾ. ಮೊಹಮದ್ ಫೈಸಲ್ ಅವರು ಭಾರತೀಯ ಉಪ ರಾಯಭಾರಿ ಜೆ.ಪಿ. ಸಿಂಗ್ ಅವರಿಗೆ ಪತ್ರ ಮುಖೇನ ಕದನ ವಿರಾಮ ಮಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸೇನೆ ನಾಗರಿಕರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸುತ್ತಿದ್ದು, ಅಂತರ ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಮಾನವೀಯ ಕಾನೂನುಗಳನ್ನು ಉಲ್ಲಂಘಿಸುತ್ತಿದೆ' 2003ರ ಕದನ ವಿರಾಮ ನೀತಿಗೆ ಬೆಲೆ ನೀಡಿ ಅಪ್ರೋಚೋದಿತ ದಾಳಿಗಳನ್ನು ನಿಲ್ಲಿಸಬೇಕು' ಎಂದು ಆಗ್ರಹಿಸಿದೆ.
ಮೇ 17 ರಂದು ಬಾಲಾಕೋಟೆ ಹಾಗೂ ಮೇ.28 ರಂದು ಕೀರನ್ ವಲಯಗಳ ಗಡಿ ನಿಯತ್ರಣ ರೇಖೆಗಳಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿತ್ತು. ನೆರೆಯ ದೇಶ ತಾನು ಮಾಡುತ್ತಿರುವ ತಪ್ಪುಗಳನ್ನು ಭಾರತ ದೇಶದ ದೇಶದ ಮೇಲೆ ಹೊರಿಸುತ್ತಿದೆ. ಭಾರತೀಯ ಸೇನೆ ಮಾತ್ರ ಪಾಕ್ ಆರೋಪಗಳಿಗೆ ಯಾವುದೇ ಪ್ರತ್ಯುತ್ತರ ನೀಡಿಲ್ಲ.
