ಉತ್ತರ ಕನ್ನಡದಲ್ಲಿ ಭಾರಿ ಮಳೆ: ಐವರು ನೀರು ಪಾಲು

ಉತ್ತರ ಕನ್ನಡ(ಸೆ.17): ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಕಾರವಾರ ತಾಲೂಕಿನ ಚೆಂಡಿಯಾದ ನಾಗರಮಡಿ ಫಾಲ್ಸ್​​​​​​ನಲ್ಲಿ ಐವರು ನೀರು ಪಾಲಾಗಿದ್ದಾರೆ.

ಮೃತರು ಗೋವಾ ಮೂಲದವರಾಗಿದ್ದು, ನಾಗರಮಡಿ ಫಾಲ್ಸ್'ಗೆ ಪ್ರವಾಸಕ್ಕೆ ಬಂದಿದ್ದಾಗ ದುರಂತ ಸಂಭವಿಸಿದೆ. ಏಕಾಏಕಿ ನೀರು ಹರಿದು ಬಂದ ಕಾರಣದಿಂದ ಐವರು ಕೊಚ್ಚಿ ಹೋಗಿದ್ದಾರೆ. ಮಹಿಳೆಯ ಶವ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ.