ಪಟಾಕಿ ತಂದ ಅವಾಂತರ ಸುಮಾರು 10ಕ್ಕೂ ಹೆಚ್ಚು ಜನರಿಗೆ ಗಾಯ
ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪಟಾಕಿಯಿಂದ ಆಗಿರುವ ಗಾಯಾಳುಗಳ ಸಂಖ್ಯೆ ಕಡಿಮೆಯಾಗಿದೆ. ಆದರು ಚಿಕ್ಕಮಕ್ಕಳು ಪಟಾಕಿ ಹೊಡೆಯುವಾಗ ಎಚ್ಚರವಿರಲ್ಲಿ .
ಬೆಂಗಳೂರು(ಅ.30): ದೀಪಾವಳಿಯ ಹಬ್ಬದಲ್ಲಿ ಪಟಾಕಿ ಹೊಡೆಯವ ಸಂದರ್ಭದಲ್ಲಿ ಕಣ್ಣಿಗೆ ಪೆಟ್ಟಾಗಿ ಸುಮಾರು 10ಕ್ಕೂ ಹೆಚ್ಚು ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟಾಕಿ ತಂದ ಅವಾಂತರದಿಂದಾಗಿ ಚಾಮರಾಜಪೇಟೆ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರು ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. 8 ವರ್ಷದ ಧರಣ್ ಹಾಗೂ ಹಲಸೂರಿನ ಕವಿತಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಪಟಾಕಿ ಅವಾಂತರದಿಂದಾಗಿ ರಾಜಾಜಿನಗರ ನಾರಾಯಣ ಆಸ್ಪತ್ರೆಯಲ್ಲಿ ಏಳು, ನಾರಾಯಣ ನೇತ್ರಾಲಯ ಬೊಮಸಂದ್ರದಲ್ಲಿ ಇಬ್ಬರು, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆದಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿಯಿಂದ ಆಗಿರುವ ಗಾಯಾಳುಗಳ ಸಂಖ್ಯೆ ಕಡಿಮೆಯಾಗಿದೆ. ಆದರು ಚಿಕ್ಕಮಕ್ಕಳು ಪಟಾಕಿ ಹೊಡೆಯುವಾಗ ಎಚ್ಚರವಿರಲ್ಲಿ. ಚಿಕ್ಕ ಮಕ್ಕಳಿಗೆ ಅಪಾಯಕಾರಿಯಾದ ಪಟಾಕಿ ಹೊಡೆಯಲು ಬಿಡದಿರಿ. ಸಂಭ್ರಮದ ದೀಪಾವಳಿ ಆಚರಣೆ ಅವಾಂತರಕ್ಕೆ ಕಾರಣವಾಗದಿರಲ್ಲಿ. ಬೆಳಕಿನ ಹಬ್ಬ ನಮ್ಮ ಬೆಳಕನ್ನು ಆರಸದಿರಲ್ಲಿ .ಪುಟಾಣಿಗಳೇ ಎಚ್ಚರವಿರಲ್ಲಿ.