ರಾಮನಗರದ ಐಜೂರು ವೃತ್ತದ ಬಳಿ ಅಗ್ನಿ ದುರಂತ
ಸಯ್ಯದ್ ಮುದಾಯಿದ್ ಎಂಬುವವರಿಗೆ ಸೇರಿದ ಮೈಸೂರು ಫಾಲಿಮರ್ಸ್ ಪ್ರೈ.ಲಿ ಗೋದಾಮು ಇದಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ತಗುಲಿದ್ದು, ಗೋದಾಮಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಪ್ಲಾಸ್ಟಿಕ್, ಬಿಡಿ ಬಟ್ಟೆ , ಹಾಗೂ ಸಿಲ್ಕ್ ಅನ್ನು ದಾಸ್ತಾನು ಮಾಡಲಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಬೆಂಗಳೂರು(ಜ.05): ರಾಮನಗರದ ಐಜೂರು ವೃತ್ತದ ಬಳಿ ಭಾರೀ ಅಗ್ನಿ ದುರಂತರವೊಂದು ಸಂಭವಿಸಿದ್ದು, ಬಿಡಿ ಬಟ್ಟೆ, ರಬ್ಬರ್, ಪ್ಲಾಸ್ಟಿಕ್ ಗೋದಾಮಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಸಯ್ಯದ್ ಮುದಾಯಿದ್ ಎಂಬುವವರಿಗೆ ಸೇರಿದ ಮೈಸೂರು ಫಾಲಿಮರ್ಸ್ ಪ್ರೈ.ಲಿ ಗೋದಾಮು ಇದಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ತಗುಲಿದ್ದು, ಗೋದಾಮಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಪ್ಲಾಸ್ಟಿಕ್, ಬಿಡಿ ಬಟ್ಟೆ , ಹಾಗೂ ಸಿಲ್ಕ್ ಅನ್ನು ದಾಸ್ತಾನು ಮಾಡಲಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಎರಡು ಕೊಠಡಿಯಲ್ಲಿದ್ದ ಯಂತ್ರೋಪಕರಣಗಳು ಹಾಗೂ ಬಿಲ್ಡಿಂಗ್'ನ ಕಬ್ಬಿಣದ ವಸ್ತುಗಳು ಸಹ ಭಸ್ಮವಾಗಿವೆ.