ಹೋರಾಟ ಕೇವಲ ಕಪ್ಪು-ಹಣದ ವಿರುದ್ಧವಲ್ಲ; ಕಪ್ಪು-ಮನಸ್ಸಿನ ವಿರುದ್ಧವೂ ಕೂಡಾ: ಪ್ರಧಾನಿ ಮೋದಿ
ನನ್ನನ್ನು ಕೇವಲ ಪ್ರಧಾನಿಯಾಗಿ ನೀವು ಆಯ್ಕೆ ಮಾಡಿಲ್ಲ, ನಾನು ಈ ದೇಶದ ಕಾವಲಗಾರನೂ ಕೂಡಾ ಆಗಿದ್ದೇನೆ. ನಾನು ಸರಿಯಾಗಿ ಕೆಲಸಮಾಡುತ್ತಿರುವುದರಿಂದ ಕೆಲವರಿಗೆ ತೊಂದರೆಯಾಗುತ್ತಿದೆ ಎಂದು, ಪ್ರತಿಪಕ್ಷಗಳ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಡೆಹ್ರಾಡೂನ್ (ಡಿ,.27): ಸರ್ಕಾರದ ನೋಟು ಅಮಾನ್ಯ ಕ್ರಮವನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತನ್ನ ಹೋರಾಟವು ಕೇವಲ ಕಪ್ಪು-ಹಣದ ವಿರುದ್ಧವಾಗಿರದೇ, ಕಪ್ಪು-ಮನಸ್ಸುಗಳ ವಿರುದ್ಧವೂ ಆಗಿದೆ ಎಂದು ಹೇಳಿದ್ದಾರೆ.
ನನ್ನನ್ನು ಕೇವಲ ಪ್ರಧಾನಿಯಾಗಿ ನೀವು ಆಯ್ಕೆ ಮಾಡಿಲ್ಲ, ನಾನು ಈ ದೇಶದ ಕಾವಲಗಾರನೂ ಕೂಡಾ ಆಗಿದ್ದೇನೆ. ನಾನು ಸರಿಯಾಗಿ ಕೆಲಸಮಾಡುತ್ತಿರುವುದರಿಂದ ಕೆಲವರಿಗೆ ತೊಂದರೆಯಾಗುತ್ತಿದೆ ಎಂದು, ಪ್ರತಿಪಕ್ಷಗಳ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಡೆಹ್ರಾಡೂನ್’ನಲ್ಲಿ ಪರಿವರ್ತನಾರ್ಯಾಲಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನೋಟು ಅಮನ್ಯ ಕ್ರಮದ ಬಳಿಕ ಭಯೋತ್ಪಾದಕರು, ಮಾದಕ ವಸ್ತು ಹಾಗೂ ನಕಲಿ ನೋಟು ಸಾಗಣಿಕೆದಾರರ ಬೆನ್ನುಮೂಳೆ ಮುರಿದಿದೆ ಎಂದು ಹೇಳಿದ್ದಾರೆ.