Asianet Suvarna News Asianet Suvarna News

ರಕ್ತದಲ್ಲಿ ಸಿದ್ದು ಭಾವಚಿತ್ರ ರಚಿಸಿದ ಅಭಿಮಾನಿ!

ರಕ್ತದಲ್ಲಿ ಸಿದ್ದು ಭಾವಚಿತ್ರ ರಚಿಸಿದ ಅಭಿಮಾನಿ| ರಾಯಚೂರಿಗೆ ಭೇಟಿ ನೀಡಿದಾಗ ಭಾವಚಿತ್ರ ಉಡುಗೊರೆ

Fan Of Former Chief Minister Siddaramaiah Creates Portrait In Blood
Author
Bangalore, First Published Oct 3, 2019, 7:59 AM IST

ಬೆಂಗಳೂರು[ಅ.03]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಯೊಬ್ಬರು ತಮ್ಮ ರಕ್ತದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಬಿಡಿಸಿ ಉಡುಗೊರೆಯಾಗಿ ನೀಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ರಾಯಚೂರು ಜಿಲ್ಲೆಯ ಯರಮರಸ್‌ನ ಎಂ.ಡಿ. ಅಮಾನ್‌ ಯರಮರಸ್‌ ಎಂಬುವರು ಸಿದ್ದರಾಮಯ್ಯ ಅವರ ಅಭಿಮಾನಿ. ಸಿದ್ದರಾಮಯ್ಯ ಮಂಗಳವಾರ ರಾಯಚೂರಿಗೆ ಭೇಟಿ ನೀಡಿದಾಗ ಅಭಿಮಾನಿಯೊಬ್ಬರು ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಫೋಟೋದಲ್ಲಿ ‘ನನ್ನ ರಕ್ತದಿಂದ ಸಿದ್ದರಾಮಯ್ಯನವರ ಭಾವಚಿತ್ರವನ್ನು ಚಿತ್ರಿಸಿ ಕೊಡುಗೆಯಾಗಿ ಸಮರ್ಪಿಸುತ್ತಿದ್ದೇನೆ. ಇಂತಿ ನಿಮ್ಮ ಅಭಿಮಾನಿ ಎಂ.ಡಿ. ಅಮಾನ್‌ ಯರಮರಸ್‌. (ವಾರ್ಡ್‌ ನಂ. 33) ರಾಯಚೂರು’ ಎಂದು ಬರೆದಿದ್ದಾರೆ.

Follow Us:
Download App:
  • android
  • ios