ಮಗಳ ಮದುವೆ ಬಳಿಕ ಜಿಯೋದಿಂದ ಮತ್ತೊಂದು ಭರ್ಜರಿ ಆಫರ್ ಕೊಟ್ಟ ಅಂಬಾನಿ? ಸುಳ್ ಸುದ್ದಿ
ರಿಲಾಯನ್ಸ್ ಜಿಯೋ ಇದೀಗ ಹೊಸ ಆಫರ್ ಒಂದನ್ನು ನೀಡುತ್ತಿದೆ. ಗ್ರಾಹಕರು ಆಲೂಗಡ್ಡೆಗಳನ್ನು ನೀಡಿದಲ್ಲಿ 1 ಜಿಬಿ ಡೇಟಾವನ್ನು ಉಚಿತವಾಗಿ ನೀಡಲಿದೆ.
ಮುಂಬೈ: ದೇಶದಲ್ಲಿನ ಕೊಳೆತ ಆಲೂಗಡ್ಡೆಗಳನ್ನು ಸಂಗ್ರಹಿಸಿ ಅದರಿಂದ ಗ್ಯಾಸ್ ಮತ್ತು ಗೊಬ್ಬರ ತಯಾರಿಸಿ ಮಾರಾಟ ಮಾಡಲು ರಿಲಯನ್ಸ್ ಕಂಪನಿ ಮುಖ್ಯಸ್ಥ ಮುಕೇಶ್ ಅಂಬಾನಿ ನಿರ್ಧರಿಸಿದ್ದಾರೆ. ಇದಕ್ಕಾಗಿ ಆಲೂ ಗೋಬರ್ಗ್ಯಾಸ್ ಕಂಪನಿಯೊಂದನ್ನು ಆರಂಭಿಸಲಿದ್ದಾರೆ.
ಈ ಕಂಪನಿಗೆ ಯಥೇಚ್ಛವಾಗಿ ಕೊಳೆತ ಆಲೂಗಡ್ಡೆ ಬೇಕಿದ್ದು ಇದನ್ನು ಜನರಿಂದಲೇ ಸಂಗ್ರಹಿಸಲು ನಿರ್ಧರಿಸಿದ್ದಾರೆ. ಕನಿಷ್ಠ 1 ಕೆಜಿ ಕೊಳೆತ ಆಲೂ ಕೊಟ್ಟವರಿಗೆ ಜಿಯೋ ಕಂಪನಿ ವತಿಯಿಂದ 1 ಜಿ.ಬಿ ಡೇಟಾ ಆಫರ್ ನೀಡಿದ್ದಾರೆ.
ಮಗಳ ಮದುವೆಗೆ 700 ಕೋಟಿ ರು. ಖರ್ಚು ಮಾಡಿದವರು ಕೊಳೆತ ಆಲೂಗಡ್ಡೆ ಎಂದು ಮುಕೇಶ್ ಅಂಬಾನಿಯವರನ್ನು ಕಾಶ್ಮೀರ ರಾಜ್ಯಪಾಲರು ಟೀಕೆ ಮಾಡಿದ್ದನ್ನು ಕ್ರೀಡಾ ಸ್ಫೂರ್ತಿಯಿಂದ ತೆಗೆದುಕೊಂಡು ಅಂಬಾನಿ ಯವರು ಈ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ. ಇಷ್ಟೇ ಅಲ್ಲದೆ ತಮ್ಮನ್ನು ಟೀಕಿಸಿ ಹೊಸ ಆಲೋಚನೆ ಮೂಡುವಂತೆ ಮಾಡಿದ ರಾಜ್ಯಪಾಲರನ್ನು ಮುಕೇಶ್ ಅಭಿನಂದಿಸಿದ್ದಾರೆ.
[ಇದು ಸುಳ್ಳು ಸುದ್ದಿಯಾಗಿದ್ದು, ಇದನ್ನು ಕೇವಲ ಮನರಂಜನೆ ದೃಷ್ಟಿಯಿಂದಷ್ಟೇ ನೀಡಲಾಗುತ್ತದೆ]