Asianet Suvarna News Asianet Suvarna News

[ಸುಳ್ ಸುದ್ದಿ] ರಾಜ್ಯಕ್ಕೆ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಮಾಡಲು ನಿರ್ಧಾರ?

 ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಬಂದೊದಗಿರುವ ಕಂಟಕ ಯಾವ ದೇವಸ್ಥಾನಕ್ಕೆ ಹೋದರೂ ನಿವಾರಣೆಯಾಗದೆ ಇರುವುದನ್ನು ನೋಡಿ ಆತಂಕಗೊಂಡಿರುವ ಸಿಎಂ ಕುಮಾರಸ್ವಾಮಿ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದಾರೆ.

Fake News HD Kumaraswamy Decide To Giveup CM Post
Author
Bengaluru, First Published Sep 23, 2018, 11:41 AM IST

ಬೆಂಗಳೂರು:  ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಬಂದೊದಗಿರುವ ಕಂಟಕ ಯಾವ ದೇವಸ್ಥಾನಕ್ಕೆ ಹೋದರೂ ನಿವಾರಣೆಯಾಗದೆ ಇರುವುದನ್ನು ನೋಡಿ ಆತಂಕಗೊಂಡಿರುವ ಸಿಎಂ ಕುಮಾರಸ್ವಾಮಿ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದಾರೆ.

 ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಜೊತೆ ಸೇರಿಯೇ ಈ ನಿರ್ಧಾರ ಕೈಗೊಂಡಿದ್ದು, ಯಡಿಯೂರಪ್ಪ ಅವರು ಮೈತ್ರಿಕೂಟದ ಶಾಸಕರನ್ನು ಸೆಳೆಯುವುದನ್ನು ತಪ್ಪಿಸಲು ಯಡಿಯೂರಪ್ಪ ಅವರನ್ನೇ ಮೈತ್ರಿಕೂಟಕ್ಕೆ ಆಹ್ವಾನಿಸಲು ಸಜ್ಜಾಗಿದ್ದಾರೆ. 

ಈ ಹೊಸ ಪ್ಲಾನ್ ಪ್ರಕಾರ ಯಡಿಯೂರಪ್ಪ ಅವರನ್ನೇ ಮೈತ್ರಿಕೂಟದ ಸರ್ಕಾರಕ್ಕೆ ಮುಖ್ಯಮಂತ್ರಿ ಮಾಡಲಾಗುತ್ತದೆ. ಆಗ ಎಲ್ಲ ಬಂಡಾಯಗಳೂ ನಿಲ್ಲಲಿವೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.

Follow Us:
Download App:
  • android
  • ios