ಮದ್ಯದ ಅಮಲಿನಲ್ಲಿದ್ದ ಈ ಪುಣ್ಯಾತ್ಮನಿಗೆ ಅದು ಏನಾಗಿತ್ತೋ ಗೊತ್ತಿಲ್ಲ. ತನಗೆ ಕಚ್ಚಿದ ಹಾವನ್ನು ಕಚ್ಚಿ ಕಚ್ಚಿ ತುಂಡು ಮಾಡಿದ್ದಾನೆ. ಇದೀಗ ಆಸ್ಪತ್ರೆ ಸೇರಿದ್ದು ಚೇತರಿಸಿಕೊಳ್ಳಲಾಗದೆ ಪರದಾಡುತ್ತಿದ್ದಾನೆ.

ನವದೆಹಲಿ[ಜು. 29] ಈ ಪುಣ್ಯಾತ್ಮನಿಗೆ ಮದ್ಯದ ಅಮಲು, ನಿಶೆ ತಲೆಗೆ ಏರಿಹೋಗಿತ್ತು, ಅಮಲಿನಲ್ಲಿ ಇದ್ದವ ತನಗೆ ಕಚ್ಚಿದ ಹಾವನ್ನೇ ಕಚ್ಚಿ ಕಚ್ಚಿ ತುಂಡರಿಸಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾವಿಗೆ ಕಚ್ಚಿದ ಉತ್ತರ ಪ್ರದೇಶಸದ ಎತಾಹ್ ದ ಅಸ್ರೌಲಿ ಗ್ರಾಮದ ರಾಜಕುಮಾರ್ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.ಈ ಘಟನೆ ಕುರಿತಾಗಿ ಈಗ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಆ ವ್ಯಕ್ತಿಯ ತಂದೆ ಬಾಬು ರಾಮ್ 'ನನ್ನ ಮಗ ಕುಡಿದಿದ್ದನು. ಹಾವು ನಮ್ಮ ಮನೆಗೆ ಪ್ರವೇಶಿಸಿ ಅವನನ್ನು ಕಚ್ಚಿತು. ಅಮಲಿನಲ್ಲಿದ್ದ ಆತ ಹಾವನ್ನೇ ಕಚ್ಚಿ-ಕಚ್ಚಿ ತುಂಡು ಮಾಡಿದ.

ಕಿಚನ್‌ನಲ್ಲಿ ಕಾಳಿಂಗ ಸರ್ಪ! ವಿಡಿಯೋನೇ ನೋಡಕ್ಕಾಗಲ್ಲ, ಮುಂದಿದ್ರೆ ಏನ್ ಗತಿಯೋ!

ಅವನಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ಧೇನೆ ಎಂದು ಅಳಲು ತೋಡಿಕೊಂಡರು. ಘಟನೆಯ ನಂತರ ರಾಜ್‌ಕುಮಾರ್ ಅವರ ಕುಟುಂಬವು ಹಾವನ್ನು ಅಂತ್ಯಕ್ರಿಯೆ ಮಾಡಿತು.

Scroll to load tweet…