ಎನ್ಆರ್ಸಿಯ ಟಾರ್ಗೆಟ್ ಮುಸ್ಲಿಮರಾ?
ಕಾಲಕ್ಕೆ ತಕ್ಕಂತೆ ಬದಲಾಗುವ ವಿಪಕ್ಷಗಳ ನಿಲುವು! ಒಮ್ಮೆ ವಿರೋಧಿಸುತ್ತವೆ, ಮತ್ತೊಮ್ಮೆ ಅಪ್ಪಿಕೊಳ್ಳುತ್ತವೆ! ಎನ್ಆರ್ಸಿ ಜಾರಿಯಾದರೆ ವೋಟ್ ಬ್ಯಾಂಕ್ ಫಿನಿಷ್?
ಬೆಂಗಳೂರು(ಆ.5): ಅಕ್ರಮ ಬಾಂಗ್ಲಾ ವಲಸಿಗರ ಕುರಿತು ಹೇಗೆ ವಿಪಕ್ಷಗಳು ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿವೆ ಎಂಬುದು ಇದೀಗ ಸಾಬೀತಾಗಿದೆ. ತನ್ನ ಸಾಂಪ್ರದಾಯಿಕ ಮತಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಕಾಂಗ್ರೆಸ್, ಅಕ್ರಮ ವಲಸಿಗರ ಗೋಜಿಗೆ ಹೋಗದೇ ದೇಶಕ್ಕೆ ಸಂಚಕಾರ ತಂದಿದ್ದು ವಿಕಿಲೀಕ್ಸ್ ನಿಂದ ಬಹಿರಂಗವಾಗಿದೆ.
ಆದರೆ ಅಕ್ರಮ ವಲಸಿಗರಿಂದ ಅಸ್ಸೋಂ ರಾಜ್ಯವನ್ನು ಮುಕ್ತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವಾಗ, ಎಲ್ಲಾ ವಿಪಕ್ಷಗಳು ಕೂಡಿ ಮೋದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿವೆ. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ನಾಗರಿಕ ಕಾಯ್ದೆಯನ್ನು ವಿಪಕ್ಷಗಳು ಒಕ್ಕೊರಲಿನಿಂದ ವಿರೋಧಿಸಲು ಕಾರಣವಾದರೂ ಏನು?.
ಈ ಕುರಿತು ನಿಮ್ಮ ಸುವಣರ್ಣ ನ್ಯೂಸ್ ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ನಲ್ಲಿ ನಡೆದ ಚರ್ಚೆಯ ಪೂರ್ಣ ವಿವರ ಇಲ್ಲಿದೆ..